ಹುಬ್ಬಳ್ಳಿಯಲ್ಲಿ ಮಟಮಟ ಮಧ್ಯಾಹ್ನ ಮರ್ಡರ್

300

ಪ್ರಜಾಸ್ತ್ರ ಅಪರಾಧ ಸುದ್ದಿ

ಹುಬ್ಬಳ್ಳಿ: ನಗರದಲ್ಲಿ ಬುಧವಾರ ಮಧ್ಯಾಹ್ನ ವ್ಯಕ್ತಿಯೊಬ್ಬ ಹತ್ಯೆಯಾಗಿದೆ. ಕಮರಿಪೇಟೆ ನಿವಾಸಿ ರಮೇಶ ಭಾಂಡೆಗೆ ಎಂಬಾತನನ್ನ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಕಟಿಂಗ್ ಮಾಡಿಸಿಕೊಳ್ಳಲು ಬಂದಾಗ ರಮೇಶ ಭಾಂಡೆಗೆ ಹತ್ಯೆಯಾಗಿದೆ.

ಕಟಿಂಗ್ ಶಾಪಿನಿಂದ ಹೊರಗೆ ಬರ್ತಿದ್ದಂತೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ರಮೇಶನನ್ನ ಅಟ್ಟಾಡಿಸಿಕೊಂಡು ಹತ್ಯೆ ಮಾಡಿದ್ದಾರೆ.  ತೀವ್ರವಾಗಿ ಗಾಯಗೊಂಡಿದ್ದ ರಮೇಶನನ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗ್ತಿದ್ರೂ ಬದುಕುಳಿಯಲಿಲ್ಲವೆಂದು ತಿಳಿದು ಬಂದಿದೆ.

ಸ್ಥಳಕ್ಕೆ ಡಿಸಿಪಿ, ಎಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ರಮೇಶ ಭಾಂಡೆಗೆ ಈ ಹಿಂದೆ ರೌಡಿ ಶೀಟರ್ ಸಹ ಆಗಿದ್ದ. ಶಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಾವ ಕಾರಣಕ್ಕೆ ಕೊಲೆ ಮಾಡಲಾಗಿದೆ ಅನ್ನೋದರ ತನಿಖೆ ನಡೆಯುತ್ತಿದೆ.




Leave a Reply

Your email address will not be published. Required fields are marked *

error: Content is protected !!