ಪ್ರಜಾಸ್ತ್ರ ಸುದ್ದಿ
ಚಿಕ್ಕಮಗಳೂರು: ಟ್ರ್ಯಾಕ್ಟರ್ ಟೈರ್ ಬದಲಾಯಿಸುವ ಸಂದರ್ಭದಲ್ಲಿ ಜಾಕ್ ಮುರಿದು ಹೋದ ಪರಿಣಾಮ ಇಬ್ಬರ ಮೇಲೆ ಟ್ರಾಲಿ ಬಿದ್ದು ಮೃತಪಟ್ಟ ಘಟನೆ ಕೊಪ್ಪ ತಾಲೂಕಿನ ನಿಲುವಾಗಿಲು ಗ್ರಾಮದಲ್ಲಿ ನಡೆದಿದೆ.
ಸುಬ್ರಹ್ಮಣ್ಯ(30) ಹಾಗೂ ಸುನೀಲ್(27) ಮೃತ ದುರ್ದೈವಿಗಳು. ಟೈರ್ ಬದಲಾಯಿಸುವ ಸಂಬಂಧ ಜಾಕ್ ಹಚ್ಚಿ ಕೆಲಸ ಮಾಡುತ್ತಿದ್ದಾರೆ. ಆಗ ಜಾಕ್ ಕಟ್ ಆಗಿದೆ. ಇದರಿಂದಾಗಿ ಟ್ರಾಲಿ ಉರುಳಿ ಇವರ ಮೈಮೇಲೆ ಬಿದ್ದಿದೆ. ಹೀಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.