ಪ್ರಜಾಸ್ತ್ರ ಸುದ್ದಿ
ಬೆಳ್ತಂಗಡಿ: ಮರ ಕಡಿಯುತ್ತಿದ್ದಾಗ ಮೈ ಮೇಲೆ ಬಿದ್ದು ಮೂವರು ಸಾವನ್ನಪ್ಪಿದ ದುರಂತ ಬೆಳ್ತಂಗಡಿಯ ಪೆಟ್ರಮೆ ಗ್ರಾಮದ ಅನಾರು ಬಳಿ ನಡೆದಿದೆ. ಗಣೇಶ(38), ಪ್ರಶಾಂತ(21) ಹಾಗೂ ಸ್ವಸ್ತಿಕ(23) ಮೃತ ದುರ್ದೈವಿಗಳೆಂದು ತಿಳಿದು ಬಂದಿದೆ.
ಮಂಗಳವಾರ ಮಧ್ಯಾಹ್ನ ಅನಾರು ಕಾಯಿಲ ಲೋಕಯ್ಯಗೌಡರಿಗೆ ಸೇರಿದ ಧೂಪದ ಮರ ಕಡಿದು ಉರುಳಿಸುವ ದುರಂತ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.