ಪ್ರಜಾಸ್ತ್ರ ಸುದ್ದಿ
ಹೈದ್ರಾಬಾದ್: ತೆಲಂಗಾಣದ ಆಡಳಿತರೂಢ ಟಿಆರ್ ಎಸ್ ಶಾಸಕರ ಅಪಹರಣ ಹಾಗೂ ಖರೀದಿ ಪ್ರಕರಣ ಸಂಬಂಧ ತುಷಾರ್ ವೆಲ್ಲಪಲ್ಲಿ ಹಾಗೂ ಜಗ್ಗು ಸ್ವಾಮಿ ಎಂಬುವರಿಗೆ ಎಸ್ಐಟಿ ಲುಕ್ ಔಟ್ ನೋಟಿಸ್ ನೀಡಿದೆ.
ವಿಚಾರಣೆಗೆ ಹಾಜರಾಗುವಂತೆ ಈ ಹಿಂದೆ ಬಿಜೆಪಿ ರಾಷ್ಟ್ರೀಯ ಪ್ರಾಧನ ಕಾರ್ಯದರ್ಶಿ ಬಿ.ಎಲ್ ಸಂತೋಷಗೆ ನೋಟಿಸ್ ನೀಡಲಾಗಿತ್ತು. ನಂತರ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದೀಗ ಇಬ್ಬರಿಗೆ ಲುಕ್ ಔಟ್ ನೋಟಿಸ್ ನೀಡಿದ್ದು, ದೇಶ ಬಿಟ್ಟು ತೆರಳದಂತೆ ಸೂಚನೆ ನೀಡಲಾಗಿದೆ. ಇದೀಗ ಬಿ.ಎಲ್ ಸಂತೋಷಗೂ ಬಂಧನ ಭೀತಿ ಎದುರಾಗಿದೆ.