ಪ್ರಜಾಸ್ತ್ರ ಸುದ್ದಿ
ನವದೆಹಲಿ: ಮುಖ್ಯಮಂತ್ರಿಯಾಗಿ ನಾಲ್ಕು ತಿಂಗಳಲ್ಲೇ ಉತ್ತರಾಖಂಡ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರೊಂದಿಗೆ ಚರ್ಚೆ ನಡೆಸಿ, ಶುಕ್ರವಾರ ರಾತ್ರಿ 11 ಗಂಟೆಗೆ ರಾಜ್ಯಕ್ಕೆ ವಾಪಸ್ ಆಗಿದ್ದಾರೆ.
ಹೀಗೆ ಬರ್ತಿದ್ದಂತೆ ರಾತ್ರಿಯೇ ರಾಜ್ಯಪಾಲ ಬೇಬಿ ರಾಣಿ ಮೌರ್ಯ ಅವರನ್ನ ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ಮೂಲಕ ನಾಯಕತ್ವ ಬದಲಾವಣೆಯ ತೀವ್ರ ಚರ್ಚೆಯ ನಡುವೆ ಸಿಎಂ ರಾವತ್ ರಾಜೀನಾಮೆ ಸಲ್ಲಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ತಿರತ್ ಸಿಂಗ್ ರಾವತ್ ಶಾಸಕರಾಗಿ ಆಯ್ಕೆ ಆಗಿಲ್ಲ. ಅವರು ಸಂಸದರಾಗಿದ್ದು, ಸಿಎಂ ಆಗಿ 6 ತಿಂಗಳೊಳಗೆ ಶಾಸಕರಾಗಬೇಕಿದೆ. ಆದ್ರೆ, ಕರೋನಾದಿಂದಾಗಿ ಈಗಾಗ್ಲೇ ಎರಡು ತಿಂಗಳು ಚುನಾವಣೆ ಮುಂದೂಡಲಾಗಿದೆ. ಈ ಕಾರಣಕ್ಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತೀವೇಂದ್ರ ಸಿಂಗ್ ರಾವತ್, ಸತ್ಪಲ್ ಮಹಾರಾಜ, ದಾನ್ ಸಿಂಗ್ ರಾವತ್ ನಡುವೆ ತೀವ್ರ ಪೈಪೋಟಿಯಿದ್ದು, ಇಂದು ಮಧ್ಯಾಹ್ನ 3ಗಂಟೆ ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಂದಿನ ಸಿಎಂ ಆಯ್ಕೆ ನಡೆಯಲಿದೆ.