ಪ್ರಜಾಸ್ತ್ರ ಸುದ್ದಿ
ಖಟೀಮಾ: ಬಿಜೆಪಿ ಆಡಳಿತದಿಂದ ಬೇಸತ್ತಿರುವ ಜನತೆ ಈ ಬಾರಿಗೆ ಕಾಂಗ್ರೆಸ್ ಬಹುಮತ ನೀಡುವ ಮೂಲಕ ಅಧಿಕಾರಕ್ಕೆ ತರುತ್ತಾರೆ ಎಂದು ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಉತ್ತರಾಖಂಡದಲ್ಲಿವೆ ಹಿಮಾಲಯವಿದೆ. ಪರ್ವತಗಳಿವೆ. ಪ್ರಕೃತಿ ಇದೆ. ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿವೆ. ಆದರೆ, ಉದ್ಯೋಗವಿಲ್ಲ. ಇದರಿಂದಾಗಿ ಜನರು ವಲಸೆ ಹೋಗುತ್ತಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗ ಸಮಸ್ತೆ ತಾಂಡವಾಡುತ್ತಿದೆ. ಪ್ರಧಾನಿಯ ಮನ್ ಕಿ ಬಾತ್ ಕೇಳಲು ಜನರು ಸಿದ್ಧರಿಲ್ಲವೆಂದು ವಾಗ್ದಾಳಿ ನಡೆಸಿದರು.