ಪ್ರಜಾಸ್ತ್ರ ಸುದ್ದಿ
ಧಾರವಾಡ: ನಾಡಿನ ಅನೇಕ ಶರಣರ ಮತ್ತು ಮಹಾತ್ಮರ ವಚನಗಳ ಪ್ರಚಾರಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಬಸವೇಶ್ವರ ಪೀಠವು, ತನ್ನ ಸುವರ್ಣ ಮಹೋತ್ಸವ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ ವಚನಾಮೃತ ಸರಣಿ ಕಾರ್ಯಕ್ರಮವನ್ನು ಆಯೋಜಿಸಿದೆ.
ಕರ್ನಾಟಕ ವಿಶ್ವವಿದ್ಯಾಲಯ ಬಸವೇಶ್ವರ ಪೀಠ ಮತ್ತು ಧಾರವಾಡ ಆಕಾಶವಾಣಿ ಕೇಂದ್ರದ ಸಹಯೋಗದಲ್ಲಿ ವಚನಾಮೃತ ಕಾರ್ಯಕ್ರಮ ನಡೆಯಲಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಬಿ.ಗುಡಸಿ ಹೇಳಿದರು. ಸರಣಿ ಪ್ರಾಯೋಜಕತ್ವದ ಕಾರ್ಯಕ್ರಮದ ಪೂರ್ವ ಭಾವಿ ಸಂದರ್ಶನದಲ್ಲಿ ಭಾಗವಹಿಸಿ ಮಾತನಾಡಿದರು.
ಧಾರವಾಡ ಆಕಾಶವಾಣಿಯಿಂದ ಪ್ರತಿ ಭಾನುವಾರ ಮುಂಜಾನೆ 7.15ಕ್ಕೆ ಹಾಗೂ ಧಾರವಾಡ ವಿವಿಧ ಭಾರತಿಯಿಂದ ಪ್ರತಿ ಸೋಮವಾರ ಮುಂಜಾನೆ 9ಕ್ಕೆ ಮರು ಪ್ರಸಾರವಾಗುವುದು ಎಂದು ತಿಳಿಸಿದರು. ಪೂರ್ವ ಭಾವಿ ಸಂದರ್ಶನದಲ್ಲಿ ಪ್ರೊ.ಕೆ.ಬಿ.ಗುಡಸಿ, ಆಕಾಶವಾಣಿ ಕಾರ್ಯಕ್ರಮದ ಮುಖ್ಯಸ್ಥ ಬಸು ಬೇವಿನಗಿಡದ, ಬಸವ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಸಿ.ಎಂ.ಕುಂದಗೋಳ ಭಾಗವಹಿಸಿದ್ದರು.