ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕನ್ನಡಿಗರು ಹೆಚ್ಚಾಗಿರುವ ಕರ್ನಾಟಕ-ಕೇರಳ ಗಡಿ ಭಾಗದ ಜಿಲ್ಲೆಯಾದ ಕಾಸರಗೋಡಿನ ಹಲವು ಗ್ರಾಮಗಳ ಕನ್ನಡದ ಹೆಸರುಗಳನ್ನ ಕೇರಳ ಸರ್ಕಾರ ಬದಲು ಮಾಡಿದೆ. ಇದನ್ನ ಖಂಡಿಸಿ ರಾಜ್ಯದ ರಾಜಕೀಯ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸಿಎಂ ಯಡಿಯೂರಪ್ಪ ಕೇರಳ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ ಸೋಮಶೇಖರ ಸಿಎಂ ಭೇಟಿ ಮಾಡಿ, ವಿಷಯ ಪ್ರಸ್ತಾಪಿಸಿದರು. ಕಾಸರಗೋಡು, ಮಂಜೇಶ್ವರ ಭಾಗದ ಹೆಸರುಗಳನ್ನ ಬದಲು ಮಾಡಿರುವ ಕುರಿತು ಸಿಎಂ ಗಮನಕ್ಕೆ ತಂದರು.
ಈ ಬಗ್ಗೆ ಗಮನಕ್ಕೆ ಬಂದಿದೆ. ಈ ಸಂಬಂಧ ಕೇರಳ ಸರ್ಕಾರದ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಅಂತಾ ಹೇಳಿದರು.