ಬೆಂಗಳೂರು: ಕರ್ನಾಟಕಕ್ಕೆ ಮುಂದಿನ ರಾಜ್ಯಪಾಲರು ಯಾರು ಅನ್ನೋ ಕುತೂಹಲ ಮೂಡಿದೆ. ಯಾಕಂದ್ರೆ, ಇದೇ ಆಗಸ್ಟ್ 31ರಂದು ವಜುಭಾಯಿ ವಾಲಾ ಅವರ ಅಧಿಕಾರದ ಅವಧಿ ಪೂರ್ಣಗೊಳ್ಳಲಿದೆ. ಹೀಗಾಗಿ ಕರುನಾಡಿಗೆ ಯಾರು ಮುಂದಿನ ಗೌರ್ವನರ್ ಆಗಿ ಬರಲಿದ್ದಾರೆ ಅನ್ನೊ ಕುತೂಹಲವಿದೆ.
ಸೆಪ್ಟಂಬರ್ 1, 2014ರಂದು ಅಧಿಕಾರ ವಹಿಸಿಕೊಂಡಿದ್ದ ವಜುಭಾಯಿ ವಾಲಾ ಅವರು ಐದು ವರ್ಷದ ಅವಧಿ ಆಗಸ್ಟ್ 31ಕ್ಕೆ ಮುಗಿಯುತ್ತಿದೆ. ಕೇಂದ್ರ ಸರ್ಕಾರ ಆದಷ್ಟು ಬೇಗ ಮುಂದಿನ ರಾಜ್ಯಪಾಲರ ನೇಮಕ ಮಾಡುವ ಸಾಧ್ಯತೆಯಿದೆ. ಈ ರೇಸ್ ನಲ್ಲಿ ಕೇಂದ್ರ ಮಾಜಿ ಸಚಿವೆ ಉಮಾ ಭಾರತಿ, ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಹೆಸರು ಕೇಳಿ ಬರ್ತಿದೆ.