ಅಣ್ಣ-ತಮ್ಮನ ಜಗಳದ ನಡುವೆ ಅತ್ತಿಗೆ ಕೊಲೆ

213

ಪ್ರಜಾಸ್ತ್ರ ಅಪರಾಧ ಸುದ್ದಿ

ಬಾಗೇಪಲ್ಲಿ: ಹಣಕಾಸಿನ ವಿಚಾರಕ್ಕೆ ಅಣ್ಣ, ತಮ್ಮಿಂದರ ನಡುವೆ ಜಗಳ ನಡೆಯುತ್ತಿದ್ದ ವೇಳೆ ಮಧ್ಯ ಬಂದ ಅತ್ತಿಗೆ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಚಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಚೇಳೂರಿನಲ್ಲಿ ನಡೆದಿದೆ. ತ್ರಿಶಾ(35) ಕೊಲೆಯಾದ ದುರ್ದೈವಿ.

ಕೊಲೆಯಾದ ತ್ರಿಷಾ ಪತಿ ವಿಜಯಕುಮಾರ್ ಹಾಗೂ ಸಹೋದರ ರಘು ನಡುವೆ ಶನಿವಾರ ಮುಂಜಾನೆ ಜಗಳ ನಡೆದಿದೆ. ಇವರ ನಡುವೆ ಬಂದ ಅತ್ತಿಗೆ ಕುತ್ತಿಗೆಗೆ ಸಿಟ್ಟಿನಲ್ಲಿದ್ದ ರಘು ಇರಿದು ಓಡಿ ಹೋಗಿದ್ದಾನೆ. ಇದರಿಂದಾಗಿ ತ್ರಿಷಾ ಮೃತಪಟ್ಟಿದ್ದಾಳೆ.

ರಘು ಫೋನ್ ಲೋಕೇಷನ್ ಮೇಲೆ ಪಿಎಸ್ಐ ನವೀನ್ ಹಾಗೂ ಸಿಬ್ಬಂದಿ ಬಂಧಿಸಿದ್ದಾರೆ. ಕೊರಟಗೆರೆ ತಾಲೂಕಿನ ಇವರು ಊರಿನ ಹೊರಗೆ ಹಳೆಯ ಗುಜರಿ ವಸ್ತುಗಳ ವ್ಯಾಪಾರ ಮಾಡಿಕೊಂಡಿ ಇದ್ದರಂತೆ.




Leave a Reply

Your email address will not be published. Required fields are marked *

error: Content is protected !!