ಯೋಗೇಶಗೌಡ ಕೊಲೆ ಕೇಸ್: ಪ್ರಮುಖ ಆರೋಪಿ ಹತ್ಯೆಗೆ ಸ್ಕೆಚ್?

313

ಪ್ರಜಾಸ್ತ್ರ ಅಪರಾಧ ಸುದ್ದಿ

ಧಾರವಾಡ: ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೇಶಗೌಡ ಹತ್ಯೆ ಪ್ರಕರಣ ಸಂಬಂಧ ಸಿಬಿಐ ತನಿಖೆಯನ್ನ ಭರ್ಜರಿಯಾಗಿ ನಡೆಸ್ತಿದೆ. ಈಗಾಗ್ಲೇ ಈ ಸಂಬಂಧ ಹಲವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದೆ. ಮಾಜಿ ಸಚಿವ ವಿನಯ ಕುಲಕರ್ಣಿ ಅದಾಗ್ಲೇ ಬೆಳಗಾವಿ ಜೈಲಿನಲ್ಲಿದ್ದಾರೆ.

ಇದೆಲ್ಲದರ ನಡುವೆ ಇದೀಗ ಮತ್ತೊಂದು ವಿಚಾರ ಬಯಲಾಗಿದ್ದು, ಈ ಕೇಸಿನ ಪ್ರಮುಖ ಆರೋಪಿ ಬಸವರಾಜ ಮುತ್ತಗಿಯನ್ನೇ ಹತ್ಯೆ ಮಾಡಲು ಸ್ಕೆಚ್ ಹಾಕಿದ್ರಂತೆ. ಮುತ್ತಗಿಯನ್ನ ಕೊಲೆ ಮಾಡಿದ್ರೆ ಸೂಪಾರಿ ಕೊಟ್ಟವರ ಹೆಸರು, ಮಾಡಿದವರ ಹೆಸರು ಎಲ್ಲವೂ ಮುಚ್ಚಿ ಹೋಗುತ್ತೆ ಅನ್ನೋದು. ಈ ಹತ್ಯೆಯನ್ನ ಯೋಗೇಶಗೌಡನ ಸಹೋದರನ ತಲೆಗೆ ಕಟ್ಟುವುದಾಗಿ ಪ್ಲಾನ್ ಮಾಡಿದ್ರು ಎನ್ನಲಾಗ್ತಿದೆ.

ಬಸವರಾಜ ಮುತ್ತಗಿ ಹತ್ಯೆಗಾಗಿ ಬೆಂಗಳೂರಿನ ರೌಡಿಶೀಟರ್ ಒಬ್ಬನ ಜೊತೆ ಮಾತ್ನಾಡಲಾಗಿದೆ ಅನ್ನೋದರ ವಿಚಾರ ಬಯಲಾಗಿದೆ. ಫೋನ್ ರೆಕಾರ್ಡ್ ಸಮೇತ ಸಾಕಷ್ಟು ಮಾಹಿತಿ ಸಿಕ್ಕಿದೆ ಎಂದು ಹೇಳಲಾಗ್ತಿದೆ. ಇದ್ರಿಂದಾಗಿ ಮಾಜಿ ಸಚಿವ ವಿನಯ ಕುಲಕರ್ಣಿಗೆ ಇದು ಮತ್ತಷ್ಟು ಸಮಸ್ಯೆ ಎದುರಿಸುವ ಸಾಧ್ಯತೆಯಿದೆ.




Leave a Reply

Your email address will not be published. Required fields are marked *

error: Content is protected !!