ಇಂದಿನಿಂದ ‘ಯುವ ದಸರಾ ಸಂಭ್ರಮ’

975

ಮೈಸೂರು: ಇಂದಿನಿಂದ ಸೆಪ್ಟೆಂಬರ್ 26ರ ವರೆಗೂ ಯುವ ದಸರಾ ಸಂಭ್ರಮ ನಡೆಯಲಿದೆ. ನಗರದ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ಪ್ರತಿದಿನ ಸಂಜೆ 5.30 ರಿಂದ 10 ಗಂಟೆಯ ವರೆಗೂ ಕಾರ್ಯಕ್ರಮ ನಡೆಯಲಿವೆ.

ಗೋಲ್ಡನ್ ಸ್ಟಾರ್ ನಟ ಗಣೇಶ ಇಂದು ಸಂಜೆ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈ ವೇಳೆ ಶಾಸಕರಾದ ಎಸ್.ಎ ರಾಮದಾಸ, ಜಿ.ಟಿ ದೇವೇಗೌಡ ಹಾಗೂ ತನ್ವೀರ ಸೇಠ ಭಾಗವಹಿಸಲಿದ್ದಾರೆ.

ನಟ ಗೋಲ್ಡನ್ ಸ್ಟಾರ್ ಗಣೇಶ

ರಂಗಭೂಮಿಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳು ಸೇರಿದಂತೆ ಸಾಂಸ್ಕೃತಿಕ ಸಂಭ್ರಮ ಪ್ರತಿದಿನ ಸಂಜೆ 5.30ಕ್ಕೆ ನಡೆಯಲಿವೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಿಂದ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಒಟ್ಟು 260 ಕಾಲೇಜಿನಿಂದ ವಿದ್ಯಾರ್ಥಿಗಳು ಯುವ ದಸರಾ ಸಂಭ್ರಮದಲ್ಲಿ ಭಾಗವಹಿಸ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!