ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಶಾಸಕ ಅಶೋಕ ಮನಗೂಳಿಯವರ ಅಧ್ಯಕ್ಷತೆಯಲ್ಲಿ ಶನಿವಾರ ತಾಲೂಕು ಪಂಚಾಯ್ತಿ ಸಭಾ ಭವನದಲ್ಲಿ ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆಸಲಾಯಿತು. ಸಭೆಯಲ್ಲಿ ಕುಡಿಯುವ ನೀರಿನ ಪ್ರಸ್ತುತ ಸಮಸ್ಯೆ, ಮುಂದೆ ಆಗಬಹುದಾದ ಸಮಸ್ಯೆ ಕುರಿತು ಚರ್ಚಿಸಲಾಯಿತು. ಸಿಂದಗಿ ಮತ್ತು ಆಲಮೇಲ ತಾಲೂಕಿನ ಎಲ್ಲ 29 ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಬರುವ ಗ್ರಾಮಗಳ ಪ್ರಗತಿ ಪರಿಶೀಲನೆ ಮಾಡಿದರು. ಕಡಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಡ್ನಳ್ಳಿ ಗ್ರಾಮದಲ್ಲಿ ಹೊಸ ಬೋರ್ ಕೊರೆಸಲು ಮನವಿ, ಕೊರಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಯಲ್ಲಿ ಬೋರೆವೆಲ್ ಗಳಿಗೆ ಅಂತರ್ಜಲ ಮಟ್ಟ ಕಡಿಮೆಯಾಗಿದೆ. ಆದ್ದರಿಂದ ಬೋರೆವೆಲ್ ಕೊರೆಸಲು ಅವಶ್ಯಕತೆ ಇದೆ ಎಂದು ತಿಳಿಸಲಾಯಿತು.
ದೇವರನಾವದಾಗಿ, ಬಮ್ಮನಳ್ಳಿ ಗ್ರಾಮ ಪಂಚಾಯತ್ ಗಳಲ್ಲೂ ಕೂಡ ಬೋರೆವೆಲ್ ಅವಶ್ಯಕತೆ ಇದೆ ಎಂದು ಅಧಿಕಾರಿಗಳು ತಿಳಿಸಿದರು. ಸಿಂದಗಿ ತಾಲೂಕಿನ ಸುಂಗಠಾಣ ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದಗೇರಿ ಗ್ರಾಮದಲ್ಲಿ ಒಂದು ಬೋರೆವೆಲ್ ಕೊರೆಸಲು ಅವಶ್ಯಕತೆ ಇದೆ ಎಂದು ಪಿಡಿಒ ತಿಳಿಸಿದರು. ಚಾಂದಕವಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಚೌಡಯ್ಯನ ಮಡ್ಡಿ ಹತ್ತಿರ ಪೈಪ್ ಲೈನ್ ಮಾಡುವುದು, ರಾಂಪುರ ಪಿ.ಎ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಣಿಹಾರ ಗ್ರಾಮದ ಪೈಪ್ ಲೈನ್ ಸಮಸ್ಯೆಯಿದೆ. ಒಂದು ವಾರದೊಳಗೆ ಒಎಚ್ ಟಿ ಟ್ಯಾಂಕ್ ನೀರು ಪೂರೈಕೆಯಾಗುವಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ಕುರಿತು ತಿಳಿಸಲಾಯಿತು.
ಎರಡೂ ತಾಲೂಕಿನಲ್ಲಿ ಇರುವ ಬೇಡಿಕೆಗೆ ಅನುಗುಣವಾಗಿ ಕ್ರಿಯಾ ಯೋಜನೆ ಸಲ್ಲಿಸಲು ಎಲ್ಲ ಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಶಾಸಕರು ತಿಳಿಸಿದರು. ಮುಖ್ಯಮಂತ್ರಿಗಳ ನಿರ್ದೇಶನದಂತೆ ಪ್ರಜಾಸೇವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೆಪ್ಟೆಂಬರ್ 12ರಂದು ತಾಲೂಕಿನ ಯರಗಲ್ಲ ಬಿ.ಕೆ ಗ್ರಾಮ ಪಂಚಾಯತ್ ನಲ್ಲಿ ಹಾಗೂ ಸೆಪ್ಟೆಂಬರ್ 26ರಂದು ಆಲಮೇಲ ತಾಲೂಕಿನ ಮಲಘಾಣ ಗ್ರಾಮ ಪಂಚಾಯತ್ ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು ಆದ್ದರಿಂದ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಹಾಜರಿರಲು ತಿಳಿಸಿದರು.
ಸೆಪ್ಟೆಂಬರ್ 19ರಂದು ಜಿಲ್ಲಾ ಉಸ್ತುವಾರಿ ಸಚಿವ ಎಮ್.ಬಿ.ಪಾಟೀಲ ಇವರ ನೇತೃತ್ವದಲ್ಲಿ ಸಿಂದಗಿ ನಗರದಲ್ಲಿ ಪ್ರಜಾಸೇವೆ ಕಾರ್ಯಕ್ರಮ ನಡೆಯಲಿದ್ದು ಅಂದು ಕೂಡ ಎಲ್ಲರೂ ಹಾಜರಿರಲು ತಿಳಿಸಿದರು. ತಹಶೀಲ್ದಾರ್ ಕರೆಪ್ಪ ಬೆಳ್ಳಿ, ತಾಲೂಕು ಪಂಚಾಯ್ತಿ ಇಒ ಅನಿಲ ಕೆ.ಹಳ್ಳಿ, ಆಲಮೇಲ ಇಒ ನಂದೀಪ ರಾಠೋಡ ವೇದಿಕೆ ಮೇಲಿದ್ದರು. ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು, ಸಿಬ್ಬಂದಿ, ಪಿಡಿಒಗಳು ಹಾಜರಿದ್ದರು.



