LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಣಿವೆ ನಾಡಿನಲ್ಲಿ ಆರ್ಟಿಕಲ್ 370 ಮತ್ತೆಂದೂ ಬರಲ್ಲ: ಅಮಿತ್ ಶಾ

ಪ್ರಜಾಸ್ತ್ರ ಸುದ್ದಿ

ಶ್ರೀನಗರ(Srinagara): ಕಣಿವೆ ನಾಡು ಜಮ್ಮು(jammu and kashmir) ಕಾಶ್ಮೀರ್ ವಿಧಾನಸಭಾ ಚುನಾವಣೆ ಸಂಬಂಧ ಶುಕ್ರವಾರ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ(amit shah) ಪ್ರಣಾಳಿಕೆ(manifesto) ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಜಮ್ಮು ಕಾಶ್ಮೀರದಲ್ಲಿ ಮತ್ತೆಂದೂ ಆರ್ಟಿಕಲ್ 370 ಬರುವುದಿಲ್ಲ. ಅದು ಈಗ ಇತಿಹಾಸ ಎಂದು ಹೇಳಿದರು. ಈ ವಿಧಿಯಲ್ಲಿದ್ದ ವಿಶೇಷ ಸ್ಥಾನಮಾನ ಮತ್ತೆ ಜಾರಿಗೆ ಬರುವುದಿಲ್ಲವೆಂದು ದೇಶದ ಜನರಿಗೆ ಸ್ಪಷ್ಟಪಡಿಸುತ್ತಿದ್ದೇನೆ.

ಕಳೆದ 10 ವರ್ಷಗಳಲ್ಲಿ ಜಮ್ಮು ಕಾಶ್ಮೀರದಲ್ಲಿನ ಆಡಳಿತ ಸ್ವರ್ಣಾಕ್ಷರದಲ್ಲಿ ಬರೆದು ಇಡುವಂತದ್ದು. 370 ಸಂವಿಧಾನದ ಭಾಗವಲ್ಲ. ಇಲ್ಲಿ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿಷೇಧ ಮಾಡುವುದು ನಮ್ಮ ಗುರಿಯಾಗಿದೆ. ಹೀಗಾಗಿ ಒಮ್ಮೆ ನಮಗೆ ಐದು ವರ್ಷಗಳ ಅಧಿಕಾರ ನೀಡುವಂತೆ ಜನರಲ್ಲಿ ಮನವಿ ಮಾಡುತ್ತೇನೆ. ಚುನಾವಣೆ ಫಲಿತಾಂಶ ಏನೇ ಆಗಿರಲಿ. ಬಕರ್ವಾಲ್, ಗಜ್ಜರ್ ಹಾಗೂ ಪಹಾರಿಗಳಿಗೆ ನೀಡಿರುವ ಮೀಸಲಾತಿಗೆ ನಿಮಗೆ ಕೈ ಇಡಲು ಅವಕಾಶ ನೀಡುವುದಿಲ್ಲವೆಂದು ಉಮರ್ ಅಬ್ದುಲ್ಲಾ ಅವರಿಗೆ ಹೇಳಲು ಬಯಸುತ್ತೇನೆ ಎಂದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST