ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕು ಆಡಳಿತ ಕಚೇರಿಯಲ್ಲಿ ನಾಡಕಚೇರಿಯಲ್ಲಿ ಸರ್ವಸ್ ಸಮಸ್ಯೆ ಸಾಕಷ್ಟು ಕಾಣಿಸಿಕೊಂಡಿದೆ. ಇದರಿಂದಾಗಿ ವಿವಿಧ ಗ್ರಾಮಗಳಿಂದ ಇಲ್ಲಿಗೆ ಬರುತ್ತಿರುವ ಜನರು ದಿನಪೂರ್ತಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಜಾತಿ, ಆದಾಯ, ವಾಸಪತ್ರ ಸೇರಿದಂತೆ ಸಾಕಷ್ಟು ಪ್ರಮಾಣಪತ್ರಗಳು ಪಡೆಯಲು ಪರದಾಡುತ್ತಿದ್ದಾರೆ.
ಒಂದು ಪ್ರಮಾಣಪತ್ರ ಪಡೆಯಲು ಸಾರ್ವಜನಿಕರು ಪದೆಪದೆ ಸಿಂದಗಿಗೆ ಬಂದು ಹಣ ಹಾಗೂ ಸಾಕಷ್ಟು ಸಮಯವನ್ನು ಕಳೆಯಬೇಕಾಗಿದೆ. ಇಲ್ಲಿರುವ ಸಿಬ್ಬಂದಿಗೆ ಕೇಳಿದರೆ ಸರ್ವಸ್ ಸಮಸ್ಯೆಯಿದೆ. ಬೆಂಗಳೂರಿನಿಂದ ಈ ರೀತಿಯಾಗುತ್ತಿದೆ. ನಾವೇನು ಮಾಡಲು ಆಗುತ್ತಿಲ್ಲವೆಂದು ಹೇಳುತ್ತಿದ್ದಾರೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಈ ಬಗ್ಗೆ ತಹಶೀಲ್ದಾರ್ ಕರೆಪ್ಪ ಬೆಳ್ಳಿ ಅವರು ಗಮನ ಹರಿಸಿ ಶೀಘ್ರ ಸಮಸ್ಯೆ ಬಗೆಹರಿಸಬೇಕಿದೆ.



