LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಟ ಯಶ್, ಕೆಜಿಎಫ್ ಸಿನಿಮಾ ಅವಮಾನಿಸಿಲ್ಲ: ಲಕ್ಷ್ಮಿಕಾಂತ್ ರೆಡ್ಡಿ

ಪ್ರಜಾಸ್ತ್ರ ಸುದ್ದಿ

ಬಳ್ಳಾರಿ(Ballari): ನಾನು ನಟ ಯಶ್ ಬಗ್ಗೆಯಾಗಲಿ, ಕೆಜಿಎಫ್ ಸರಣಿ ಚಿತ್ರದ ಬಗ್ಗೆ ಯಾಗಲಿ ಅವಮಾನಿಸಿಲ್ಲ ಎಂದು ಸಿನಿಮಾ ವಿತರಕ ಲಕ್ಷ್ಮಿಕಾಂತ್ ರೆಡ್ಡಿ ಸೋಮವಾರ ಹೇಳಿದ್ದಾರೆ. ಬಳ್ಳಾರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ತೆಲುಗಿನ ಪುಷ್ಪ-2 ಚಿತ್ರದ ಕರ್ನಾಟಕದ ಪೂರ್ತಿ ವಿತರಣೆಯನ್ನು ನಾನು ಪಡೆದಿದ್ದೇನೆ. ಅದರ ಯಶಸ್ಸು ಬಯಸಿದ್ದೇನೆ. ಇದನ್ನು ಬಿಟ್ಟು ಯಶ್ ಬಗ್ಗೆಯಾಗಲಿ, ಕೆಜಿಎಫ್ ಚಿತ್ರಕ್ಕೆ ಅವಮಾನಿಸಿಲ್ಲ. ಯಶ್ ನಟನೆಯ ಕೆಲ ಚಿತ್ರಗಳನ್ನು ತೆಲುಗು ವಿತರಣೆ ನಾನೆ ಮಾಡಿದ್ದೇನೆ ಎಂದರು.

ಕನ್ನಡದ ಅನೇಕ ಚಿತ್ರಗಳನ್ನು ವಿತರಿಸಿದ್ದೇನೆ. ನಟರಾಜ ಸಿನಿಮಾ ಮಂದಿರದಲ್ಲಿ ಕನ್ನಡ ಚಿತ್ರಗಳಿಗೆ ಮೊದಲ ಆದ್ಯತೆ ನೀಡಿದ್ದೇನೆ. ಇತ್ತೀಚೆಗೆ ದಕ್ಷಿಣ ಭಾರತದ ಚಿತ್ರಗಳು ದೇಶ್ಯಾದ್ಯಂತ ಯಶಸ್ಸು ಕಾಣುತ್ತಿವೆ. ಬಾಹುಬಲಿ ರೆಕಾರ್ಡ್ ಯಾರೂ ಮುರಿಯಲ್ಲ ಅಂದರು. ಕೆಜಿಎಫ್ ಬ್ರೇಕ್ ಮಾಡಿತು. ಕಾಂತಾರ ಮತ್ತೊಂದು ದಾಖಲೆ ಮಾಡಿತು. ಪುಷ್ಪ-2 ಪ್ಯಾನ್ ಇಂಡಿಯಾ ಸಿನಿಮಾ. ಅದು ದಾಖಲೆಗಳನ್ನು ಮೀರಲಿ ಎಂದು ಹೇಳುವುದರಲ್ಲಿ ತಪ್ಪಿಲ್ಲ. ನಿರ್ಮಾಪಕ, ವಿತರಕ ದಾಖಲೆ ಮೀರಲಿ ಅನ್ನೋದು ತಪ್ಪಲ್ಲ. ಇದರಲ್ಲಿ ಕೆಲವರು ವಿವಾದ ಸೃಷ್ಟಿ ಮಾಡಿದರು ಅಂತಾ ಹೇಳಿದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST