LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಜಧಾನಿಯಲ್ಲಿ ಕಿಲಾಡಿಯ ಕೈ ಚಳಕ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಕಳ್ಳರು(Thieves) ತಮ್ಮ ಕೈಚಳಕ ತೋರಿಸಲು ಏನೆಲ್ಲ ಸಂಚು ರೂಪಿಸುತ್ತಾರೆ ಎನ್ನುವುದೇ ಸೋಜಿಗ. ಅವರ ಕಳ್ಳಾಟ ಬಯಲಾದಾಗ ಹೀಗೂ ಕಳ್ಳತನ(Theft) ಮಾಡುತ್ತಾರ ಎನಿಸುತ್ತೆ. ಇಲ್ಲೊಬ್ಬ ಕಿಲಾಡಿ ಮನೆಯ ಮೇಲೆ ಪಾರಿವಾಳ ಹಾರಿಸಿ ಕಳ್ಳತನ ಮಾಡುತ್ತಿದ್ದ. ಹೀಗೆ ಪಾರಿವಾಳ ಹಾರಿಸಿಯೇ ಬರೋಬ್ಬರಿ 50ಕ್ಕೂ ಹೆಚ್ಚು ಮನಗಳನ್ನು ಕಳ್ಳತನ ಮಾಡಿದ್ದಾನೆ. ಅವನೆ ಮಂಜ ಅಲಿಯಾಸ್ ಪಾರಿವಾಳ ಮಂಜ. ನಗರ್ತಪೇಟೆಯ ನಿವಾಸಿ ಈತ.

38 ವರ್ಷದ ಪಾರಿವಾಳ ಮಂಜ ತಾನು ಸಾಕಿದ ಪಾರಿವಾಳಗಳನ್ನು ಬಹುಮಹಡಿ ಕಟ್ಟಡಗಳ ಮೇಲೆ ಹಾರಿಸುತ್ತಿದ್ದ. ಅವುಗಳನ್ನ ಹಿಡಿಯುವ ನೆಪದಲ್ಲಿ ಯಾವ ಮನೆಗಳಿಗೆ ಬೀಗ ಹಾಕಿದೆ ಎನ್ನುವುದನ್ನು ಗುರುತಿಸುತ್ತಿದ್ದ. ನಂತರ ಸಮಯ ನೋಡಿ ಬೀಗ ಮುರಿದು ಮನೆಯಲ್ಲಿನ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ. ಇತನ್ನು ಬಂಧಿಸಿದ ಬಳಿಕ ಹಲಸೂರು ಗೇಟು, ಸಿಟಿ ಮಾರ್ಕೆಟ್ ವ್ಯಾಪ್ತಿಯಲ್ಲಿ ನಾಲ್ಕು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.

ಇವನು ಈ ಹಿಂದೆ ಜೈಲಿಗೆ ಹೋಗಿ ಬಂದಿದ್ದಾನೆ. ಕಳ್ಳತನವನ್ನೇ ಉದ್ಯೋಗ ಮಾಡಿಕೊಂಡಿರುವ ಪಾರಿವಾಳ(Dove) ಮಂಜ ಅದನ್ನು ಮುಂದುವರೆಸುತ್ತಿದ್ದಾನೆ. ಜಾಮೀನು ಮೇಲೆ ಹೊರಗೆ ಬರುವ ಇಂತವರು ಪದೆಪದೆ ಅಪರಾಧಿ ಕೃತ್ಯಗಳನ್ನು ನಡೆಸುತ್ತಿದ್ದರೂ ಇವರ ಮೇಲೆ ಕಠಿಣ ಕಾನೂನು ಕ್ರಮವಾಗದಿರುವುದು ಅಮಾಯಕರ ಮನೆಗಳ್ಳತನ ನಡೆಯುತ್ತಿದೆ. ಮನೆಯ ಹೊರಗೆ ಒಣಹಾಕುವ ಬಟ್ಟೆಯಿಂದ, ಚಪ್ಪಲಿಯಿಂದ ಈ ಮನೆಯಲ್ಲಿ ಎಷ್ಟು ಜನ ಇರಬಹುದು ಅನ್ನೋದು ಅಂದಾಜಿಸಿ ಕಳ್ಳತನ ಮಾಡುವವರು ಸಹ ಇದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST