ಪ್ರಜಾಸ್ತ್ರ ಸುದ್ದಿ
ಪುಣೆ(Pune): ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರವಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗ್ಲೇ ಭಾವಿ ಪತ್ನಿ ಹಾಗೂ ಪ್ರಿಯಕರನ್ನನು ಈಗಾಗ್ಲೇ ಪೊಲೀಸರು ಬಂಧಿಸಿದ್ದಾರೆ. ಸಿಯಾ ಗೋಯಲ್(20) ಹಾಗೂ ಪ್ರಿಯಕರ ಬಾಬುಲಾಲ್ ಚೌಧರಿ(22) ಬಂಧಿಸಲಾಗಿದೆ. ಹತ್ಯೆಯಾದ ಕೇತನ್ ಮೊಬೈಲ್ ಸಿಯಾ ಬಳಿ ಇತ್ತು. ನಂತರ ಅದನ್ನು ಕುಟುಂಬಕ್ಕೆ ನೀಡಿದ್ದಳು ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಜೂನ್ 18ರಂದು ಲೋಹಾಗಢಕ್ಕೆ ಚಾರಣದ ನೆಪದಲ್ಲಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಕಣಿವೆಗೆ ತಳ್ಳಿ ಕೊಲೆ ಮಾಡಲಾಗಿದೆ. ಪುಣೆ ಗ್ರಾಮೀಣ ಠಾಣೆ ಪೊಲೀಸರು ಸಿಯಾಳನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿ ಗೊಂಬೆಯನ್ನು ಕಂದಕಕ್ಕೆ ತಳ್ಳುವ ಮೂಲಕ ಘಟನೆಯನ್ನು ಮರುಸೃಷ್ಟಿಸಿದ್ದಾರೆ. ಈ ಮೂಲಕ ಕೊಲೆ ಹೇಗೆ ಮಾಡಲಾಯಿತು ಎಂದು ತಿಳಿದುಕೊಳ್ಳಲಾಗಿದೆ. ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ವಿಸ್ತರಿಸುವಂತೆ ಪ್ರಾಸಿಕ್ಯೂಷನ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.



