ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಜಿಲ್ಲೆಯ ಇಂಡಿ ನಗರದಲ್ಲಿ ನಿವೃತ್ತ ಶಿಕ್ಷಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ತಾಲೂಕಿನ ಚವಾಡಿಹಾಳ್ ರೋಡ್ ನ ಪೂಜಾರಿ ವಸ್ತಿ ಹತ್ತಿರ ಭಾನುವಾರ ಈ ಒಂದು ಕೊಲೆ ನಡೆದಿದೆ. ಸುಮಾರು 63 ವರ್ಷದ ಸಿದ್ದಪ್ಪ ಅಂಜುಟಗಿ ಕೊಲೆಯಾದ ವ್ಯಕ್ತಿಯಾಗಿದ್ದಾರೆ. ಕೊಲೆಗೆ ಏನು ಕಾರಣ, ಯಾರು ಮಾಡಿದ್ದಾರೆ ಅನ್ನೋದು ಸಧ್ಯಕ್ಕೆ ತಿಳಿದು ಬಂದಿಲ್ಲ. ಇಂಡಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.



