ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ನಗರದ ಪ್ರಸಿದ್ಧ ವಿರಕ್ತಮಠದ ಪೀಠಾಧ್ಯಕ್ಷರಾಗಿದ್ದ ಲಿಂಗೈಕ್ಯ ಶ್ರೀ ಮುನಿಪ್ರ ಸಿದ್ಧಲಿಂಗ ಮಹಾಸ್ವಾಮಿಗಳ 5ನೇ ಪುಣ್ಯಸ್ಮರಣೆ ಕಾರ್ಯಕ್ರಮ ಆಗಸ್ಟ್ 15 ಶನಿವಾರ ನಡೆಯಿತು. ಮಠದ ಆವರಣದಲ್ಲಿನ ಅವರ ಗದ್ದುಗೆಗೆ ಪೂಜೆ ಸಲ್ಲಿಸಲಾಯಿತು. ಲಿಂಗೈಕ್ಯ ಸಿದ್ಧಲಿಂಗ ಸ್ವಾಮೀಜಿ ಪ್ರತಿಷ್ಠಾನದ ಅಧ್ಯಕ್ಷ ಅಧ್ಯಕ್ಷ ಗುರುರಾಜ ಮಠ ಅವರು ಗದ್ದುಗೆಗೆ ರುದ್ರಾಭಿಷೇಕ ಹಾಗೂ ಮಹಾಪೂಜೆ ನೆರವೇರಿಸಿದರು.
ಈ ವೇಳೆ ಮಠದ ಭಕ್ತರು, ಪತ್ರಕರ್ತರಾದ ರವಿ ಮಲ್ಲೇದ, ಸುದರ್ಶನ ಜಂಗಣ್ಣಿ, ಪುಟ್ಟು ದೇಸಾಯಿ, ಶಾಂತವೀರ ಹಿರೇಮಠ ಹಾಗೂ ಸಾಗರ ಜೇರಟಗಿ, ಮುದುಕು ಗಡ್ಡಿ, ಅವಿನಾಶ ಯಂಕಂಚಿ, ಪುಂಡಲೀಕ ಬಿರಾದಾರ, ಪ್ರಶಾಂತ ಕದ್ದರಕಿ, ಸುನಿಲ ಯಾದವ, ಶಂಕರ ಬಮ್ಮನಳ್ಳಿ, ಕೇದಾರ ಮಠ, ವಿರುಪಾಕ್ಷಿ ಹಿರೇಮಠ ಸೇರಿದಂತೆ ಅನೇಕರಿದ್ದರು.



