LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಈ ಸಲನೂ ಕಪ್ ನಮ್ದೇ ಎಂದ RCB

ಪ್ರಜಾಸ್ತ್ರ ಸುದ್ದಿ

ಅಹಮದಾಬಾದ್(Ahmedabad): ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆದ ಐಪಿಎಲ್-2026 ಫೈನಲ್ ಪಂದ್ಯದಲ್ಲಿ ಗಜರಾತ್ ಟೈಟನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಸತತ 2ನೇ ಬಾರಿಗೆ ಕಪ್ ಗೆದ್ದು ಚಾಂಪಿಯನ್ ಆಗಿದೆ. ಟಾಸ್ ಗೆದ್ದ ಆರ್ ಸಿಬಿ ತಂಡದ ನಾಯಕ ರಜತ್ ಪಟೀದಾರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡದ ನಾಯಕ ಶುಭನಂ ಗಿಲ್, ಸಾಯಿ ಸುದರ್ಶನ್ ಜೋಡಿಯನ್ನು ಹೆಚ್ಚು ಹೊತ್ತು ಅಂಗಳದಲ್ಲಿ ನಿಲ್ಲದಂತೆ ಮಾಡಿದ್ದು ಭುವನೇಶ್ವರ್ ಹಾಗೂ ಹೇಝಲ್ ವುಡ್. ಸಾಯಿ ಸುದರ್ಶನ್ 12, ಗಿಲ್ 10 ರನ್ ಗೆ ಔಟ್ ಮಾಡಿದರು. ಮುಂದೆ ಬಂದವರಿಗೂ ಸಹ ಆಡಲು ಅವಕಾಶ ಕೊಡದಂತೆ ಆರ್ ಸಿಬಿ ಬೌಲರ್ ಗಳು ಕಾಟ ಕೊಟ್ಟರು. ನಿಶಾಂತ್ ಸಿಂಧು 20, ಜೋಶ್ ಬಟ್ಲರ್ 19 ರನ್ ಗೆ ಔಟ್ ಮಾಡಿದರು. ಅರ್ಷದ್ ಖಾನ್ 17, ರಾಹುಲ್ ತೇವಾಟಿಯಾ 7, ಜಸನ್ ಹೋಲ್ಡರ್ 7, ರಶೀದ್ ಖಾನ್ 7 ರನ್ ಗೆ ಔಟ್ ಆದರು. ವಾಷಿಂಗ್ಟನ್ ಸುಂದರ್ ಏಕಾಂಗಿಯಾಗಿ ಆಡಿ ಅಜೇಯ 50 ರನ್ ಗಳಿಸಿದರು.

ಅಂತಿಮವಾಗಿ ಜಿಟಿ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು. ಆರ್ ಸಿಬಿ ರಸಿಕ್ ಸಲಾಂ 3, ಭುವನೇಶ್ವರ್ ಕುಮಾರ್, ಹೇಝಲ್ ವುಡ್ ತಲಾ 2 ವಿಕೆಟ್ ಪಡೆದು ಸಂಭ್ರಮಿಸಿದರು. ಕುನಾಲ್ ಪಾಂಡ್ಯ 1 ವಿಕೆಟ್ ಪಡೆದರು. ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ಆರ್ ಸಿಬಿ ಪಡೆ ಆರಂಭದಲ್ಲಿಯೇ ಅಬ್ಬರಿಸಿತು. ವೆಂಕಟೇಶ್ ಅಯ್ಯರ್, ಅನುಭವಿ ವಿರಾಟ್ ಕೊಹ್ಲಿ ಜೋಡಿ 4.3 ಓವರ್ ಗಳಲ್ಲಿ 61 ರನ್ ಗಳಿಸಿತು. ಅಬ್ಬರಿಸುತ್ತಿದ್ದ ವೆಂಕಟೇಶ್ ಕಾಲಿಗೆ ಪಟ್ಟು ಮಾಡಿಕೊಂಡಿದ್ದರು. ಆ ನೋವಿನ ನಡುವೆ 16 ಬೌಲ್ ಗಳಲ್ಲಿ 32 ರನ್ ಗಳೊಂದಿಗೆ ಆಡುತ್ತಿದ್ದಾಗ ಸಿರಾಜ್ ಬೌಲಿಂಗ್ ಗೆ ರಬಾಡ್ ಕ್ಯಾಚ್ ಕೊಟ್ಟು ಹೊರ ನಡೆದರು.

ಮುಂದೆ ದೇವದತ್ ಪಡಿಕಲ್ ರಬಾಡ್ ಬೌಲಿಂಗ್ ನಲ್ಲಿ ಸಿಕ್ಸರ್ ಎತ್ತಿದ್ದರು. ಅರ್ಷದ್ ಖಾನ್ ಬೌಂಡರಿ ಲೈನ್ ನಲ್ಲಿ ಕ್ಯಾಚ್ ಹಿಡಿದರು. ಹೀಗಾಗಿ 1 ರನ್ ಗೆ ಔಟ್ ಆದರು. ನಾಯಕ ಪಟೀದಾರ್ 15 ಹಾಗೂ ಕುನಾಲ್ ಪಾಂಡ್ಯ 1 ರನ್ ಗೆ ಔಟ್ ಮಾಡಿದ್ದು ರಶೀದ್ ಖಾನ್. ಮೊದಲ ಓವರ್ ನಲ್ಲಿ 2 ವಿಕೆಟ್ ಪಡೆದ ರಶೀದ್ ಖಾನ್ ಆರ್ ಸಿಬಿಗೆ ಶಾಕ್ ಕೊಟ್ಟರು. ಆದರೆ, ಇನ್ನೊಂದು ಕಡೆ ಗಟ್ಟಿಯಾಗಿ ನಿಂತಿದ್ದ ಚೇಸ್ ಮಾಸ್ಟರ್ ಕೊಹ್ಲಿ ರನ್ ಕಲೆ ಹಾಕುತ್ತಿದ್ದರು. ಟಿಮ್ ಡೇವಿಡ್ 24 ರನ್ ಗೆ ಔಟ್ ಆದರು. ಕೊಹ್ಲಿ ಅಜೇಯ 75 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿ 2ನೇ ಬಾರಿಗೆ ಚಾಂಪಿಯನ್ ಆಗುವಂತೆ ಮಾಡಿದರು.

ಜಿತೇಶ್ ಶರ್ಮಾ ಅಜೇಯ 11 ರನ್ ಗಳಿಸಿದರು. 18 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿ ಈ ಸಲನೂ ಕಪ್ ನಮ್ದೇ ಎಂದು ಆರ್ ಸಿಬಿ ಬೀಗಿತು. ಜಿಟಿ ಪರ ರಶೀದ್ ಖಾನ್ 2, ಸಿರಾಜ್, ರಬಾಡ್, ಅರ್ಷದ್ ಖಾನ್ ತಲಾ 1 ವಿಕೆಟ್ ಪಡೆದರು. ಕೊಹ್ಲಿ ಪ್ಲೇಯರ್ ಆಪ್ ದಿ ಮ್ಯಾಚ್ ಆದರು. ಯುವ ಆಟಗಾರ ವೈಭವ್ ಸೂರ್ಯವಂಶಿ ಪ್ಲೇಯರ್ ಆಫ್ ದಿ ಸೀರಿಸ್ ಆದರು.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST