ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ನಗರದ ವಾರ್ಡ್ ನಂಬರ್ 6ರಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದ ತಾಲೂಕಾ ಅಧ್ಯಕ್ಷರಾದ ಹಣಮಂತ ಸುಣಗಾರ ಅವರ ಮನೆಗೆ ತಹಶೀಲ್ದಾರ್ ಕರೆಪ್ಪ ಬೆಳ್ಳಿ ಅವರು ಭಾನುವಾರ ಭೇಟಿ ನೀಡಿ, ಮತದಾರರ ಸಮಗ್ರ ಪರಿಷ್ಕರಣೆಯ ಅರ್ಜಿಯನ್ನು ನೀಡಿದರು. ಇದೆ ವೇಳೆ ವಾರ್ಡ್ ನಂಬರ್ 6ರಲ್ಲಿರುವ ಮನೆಗಳಿಗೆ ಬಿಎಲ್ಓಗಳು ಭೇಟಿ ನೀಡಿ ಎನ್ಯೂಮರೇಷನ್ ಫಾರ್ಮ್ ನೀಡಿದರು.
ಎಸ್ಐಆರ್ ಕಾರ್ಯವು ಅತ್ಯಂತ ಪಾರದರ್ಶಕತೆಯಿಂದ ನಡೆಯಲಿ. ಇದಕ್ಕೆ ತಾಲೂಕಿನ ಜನತೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಾರೆ. ಯಾವುದೇ ರೀತಿಯ ಲೋಪದೋಷಗಳು ಆಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು. ಪುರಸಭೆ ಅಧ್ಯಕ್ಷರಾಗಿಯೂ ಕೆಲಸ ಮಾಡಿರುವ ಹಣಮಂತ ಸುಣಗಾರ ಅವರು ಪ್ರಸ್ತುತ ನಗರಾಭಿವೃದ್ಧಿ ಪ್ರಾಧಿಕಾರದ ತಾಲೂಕಾಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.



