ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ವ್ಹೀಲಿಂಗ್ ಮಾಡುಲು ಹೋಗಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಸಂಭವಿಸಿ ಮೂವರು ದುರ್ಮರಣ ಹೊಂದಿದ ಘಟನೆ ನಡೆದಿದೆ. ಜಕ್ಕೂರು ಫ್ಲೈಓವರ್ ಹತ್ತಿರದ ಏರ್ ಪೋರ್ಟ್ ರಸ್ತೆಯಲ್ಲಿ ದಾರುಣ ಘಟನೆ ನಡೆದಿದೆ.
ಸೈಯ್ಯದ ರಿಯಾಜ ಹಾಗೂ ಆದಿಲ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಕೊಲಂಬಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಇಂದು ಭಾನುವಾರ ಆಗಿರುವುದ್ರಿಂದ ರಸ್ತೆ ಖಾಲಿ ಇದೆ. ಅದರಲ್ಲಿ ಬೇರೆ ಗ್ರಹಣ ಇರುವುದ್ರಿಂದ ಜನರ ಓಡಾಟ ಸಹ ಕಡಿಮೆಯಿದೆ. ಇಂಥಾ ಟೈಂನಲ್ಲಿ ವ್ಹೀಲಿಂಗ್ ಮಾಡಲು ಹೋಗಿ ಮಸಣ ಸೇರಿದ್ದಾರೆ. ಈ ಸಂಬಂಧ ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.