ಪ್ರಜಾಸ್ತ್ರ ಸುದ್ದಿ
ಸಿಂದಗಿ: ಭಾನುವಾರ 2019-20ನೇ ಸಾಲಿನ ಕಿರಿಯ ಸಹಾಯಕರು ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಈ ಸಂಬಂಧ ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಸಲಾಯಿತು.
ಕೋವಿಡ್ 3ನೇ ಅಲೆಯ ಭೀತಿಯಲ್ಲಿ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಪರೀಕ್ಷೆ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಬಿಇಓ ಆರ್.ಎಸ್ ನೀರಲಗಿ, ಪಿಎಸ್ಐ ನಿಂಗಪ್ಪ ಪೂಜಾರಿ, ಮೂವರು ವೀಕ್ಷಕರು, 12 ಪರೀಕ್ಷಾ ಕೇಂದ್ರಗಳ ಸ್ಥಳಿಯ ನಿರೀಕ್ಷಣಾಧಿಕಾರಿಗಳು, 12 ಪರಿಕ್ಷಾ ಕೇಂದ್ರಗಳ ಮೇಲ್ವಿಚಾರಕರು ಹಾಗೂ 6 ಮಾರ್ಗಾಧಿಕಾರಿಗಳು ಹಾಜರಿದ್ದರು.