ಪ್ರಜಾಸ್ತ್ರ ಸುದ್ದಿ
ಗಾಂಧಿನಗರ: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಶನಿವಾರ ದಿಢೀರ್ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಬಿಜೆಪಿ ಪಾಳೆಯದಲ್ಲಿ ಸಾಕಷ್ಟು ಅಚ್ಚರಿಯ ಚಟುವಟಿಕೆಗಳು ನಡೆದಿವೆ. ರಾಜ್ಯಪಾಲರಿಗೆ ರೂಪಾನಿ ರಾಜೀನಾಮೆ ಸಲ್ಲಿಸಿದ್ದು, ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಮುಂದಿನ ವರ್ಷ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹೊತ್ತಿನಲ್ಲಿ ರೂಪಾನಿ ರಾಜೀನಾಮೆ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಹೀಗಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ ಮತ್ತು ಹಿರಿಯ ಮುಖಂಡ ಭೂಪೇಂದ್ರ ಯಾದವ್ ಗಾಂಧಿ ನಗರದಲ್ಲಿ ಬೀಡು ಬಿಟ್ಟಿದ್ದು, ಭಾನುವಾರ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.
ಪಟೇದಾರ್ ಸಮುದಾಯದ ನಾಯಕ ಕೇಂದ್ರ ಸಚಿವ ಮನುಸುಖ್ ಮಾಂಡವೀಯ, ಪುರುಷೋತ್ತಮ್ ರೂಪಾಲಿ, ನಿತಿನ್ ಪಟೇಲ್ ಹಾಗೂ ಸಿ.ಆರ್ ಪಾಟೀಲ್ ಹೆಸರು ಕೇಳಿ ಬರ್ತಿದೆ. ಹೀಗಾಗಿ ಮುಂದಿನ ಒಂದು ವರ್ಷಗಳ ಕಾಲ ಸಿಎಂ ಯಾರಾಗಬಹುದು ಅನ್ನೋ ಚರ್ಚೆ ಜೋರಾಗಿದೆ.