ಪ್ರಜಾಸ್ತ್ರ ಸುದ್ದಿ
ಧಾರವಾಡ: ವಿದ್ಯಾಕಾಶಿಯಲ್ಲಿ ಕೋಟಿ ಕೋಟಿ ರೂಪಾಯಿ ಪತ್ತೆಯಾಗಿದೆ. ಕಂತೆ ಕಂತೆಯಾಗಿ ಪತ್ತೆಯಾದ ಹಣವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಸ್ ಬಿಐ ಮುಖ್ಯ ಶಾಖೆಗೆ ರವಾನಿಸಿದ್ದಾರೆ.
ನಾರಾಯಣಪುರದ ಆರ್ನಾ ರೆಸಿಡೆನ್ಸಿಯ ಮನೆಯೊಂದರಲ್ಲಿ ಕಂತೆ ಕಂತೆ ಹಣದ ಬ್ಯಾಗ್ ಗಳು ಪತ್ತೆಯಾಗಿವೆ. ಇದರ ಹತ್ತಿರದ ಯುಬಿ ಶೆಟ್ಟಿ ಗ್ರೂಫ್ ಆಫ್ ಕಂಪನೀಸ್ ಕಟ್ಟಡದಲ್ಲಿಯೂ ಪರಿಶೀಲನೆ ನಡೆಸಲಾಗುತ್ತಿದೆ. ಎಷ್ಟು ಹಣ ಪತ್ತೆಯಾಗಿದೆ ಎನ್ನೋದು ಅಧಿಕಾರಿಗಳು ತಿಳಿಸಬೇಕಿದೆ.