ಬೆಂಗಳೂರು: ಕನ್ನಡ ರಾಜ್ಯೋತ್ಸವದ ದಿನ ನಾಡಿನ ತುಂಬಾ ಹಾರಾಡುವುದು ನಾಡಿನ ಹೆಮ್ಮೆಯ ಬಾವುಟ. ಇದರ ಬದಲು ರಾಷ್ಟ್ರಧ್ವಜ ಹಾರಿಸುವಂತೆ ರಾಜ್ಯ ಸರ್ಕಾರ ಸುತ್ತೋಲೆ ನೀಡಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ ವಾಗ್ದಾಳಿ ನಡೆಸಿದ್ದಾರೆ.
ನಾಡಧ್ವಜ ಕನ್ನಡದ ಅಸ್ಮಿತೆ. ದಶಕಗಳಿಂದ ಜನ ಮಾನಸದಲ್ಲಿ ನೆಲೆಯೂರಿದೆ. ಧ್ವಜ ಸಂಹಿತೆ ಹೆಸರಿನಲ್ಲಿ, ಬಿಜೆಪಿ ಕನ್ನಡಿಗರ ಭಾವನೆಯೊಂದಿಗೆ ಚೆಲ್ಲಾಟವಾಡ್ತಿದೆ. ಕರ್ನಾಟಕದಲ್ಲಿ ನಾಡಧ್ವಜವಲ್ಲದೆ ಭಗವಧ್ವಜ ಹಾರಿಸಬೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಡ ಧ್ವಜದ ಬದಲು ರಾಷ್ಟ್ರಧ್ವಜ ಹಾರಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಕಡ್ಡಾಯವಾಗಿ ಸೂಚನೆ ನೀಡಿದೆ. ಶಿಕ್ಷಣ ಇಲಾಖೆಗೂ ಸೂಚನೆ ನೀಡಿದೆ. ಇದು ರಾಜ್ಯದಲ್ಲಿ ಸಾಕಷ್ಟು ವಿವಾದ ಹುಟ್ಟು ಹಾಕಿದೆ. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕನ್ನಡಿಗರು ಕೆಂಡ ಕಾರುತ್ತಿದ್ದಾರೆ.