ಬೆಂಗಳೂರು: ನಾಲ್ಕುವರೆ ವರ್ಷದಲ್ಲಿ ಬೆಂಗಳೂರಿನಲ್ಲಿನ ಬರೋಬ್ಬರಿ 15 ಕೆರೆಗಳು ಕಣ್ಮರೆಯಾಗಿವೆ. ಅದ್ಹೇಗೆ ಕಣ್ಮರೆಯಾದ್ವು ಅಂತಾ ಹೈಕೋರ್ಟ್ ಬಿಬಿಎಂಪಿಗೆ ಪ್ರಶ್ನೆ ಮಾಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿನ ರಾಜಕಾಲುವೆ ಒತ್ತುವರಿ ತೆರವು ಕೋರಿ ಸಿಟಿಜನ್ಸ್ ಆಕ್ಷನ್ ತಂಡ ಹಾಗೂ ಜೆಪಿನಗರದ ನಿವಾಸಿಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ರು. ಇದರ ವಿಚಾರಣೆಯನ್ನ ಸಿಜೆ ಎ.ಎಸ್ ಓಕ್ ಹಾಗೂ ನ್ಯಾ.ಪಿ.ಎಸ್ ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ನಡೆಸಿತು.
ಈ ವೇಳೆ ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ ಅವರು, ಬಿಬಿಎಂಪಿ ವಶದಲ್ಲಿ 168 ಕೆರೆಗಳಿವೆ. ಅದರಲ್ಲಿ 19 ಕೆರೆಗಳು ಅಸ್ತಿತ್ವ ಕಳೆದುಕೊಂಡಿವೆ. 58 ಕೆರೆಗಳನ್ನ ಬಿಡಿಎ ನೋಡಿಕೊಳ್ತಿದೆ ಅಂತಾ ಹೇಳಿದ್ರು. ಇದೇ ವೇಳೆ ನ್ಯಾಯಪೀಠ, 2014ರಲ್ಲಿ 183 ಕೆರೆಗಳು ಇದ್ವ. ಇದೀಗ 168 ಕೆರೆಗಳು ಇವೆ ಅಂತಾ ಬಿಬಿಎಂಪಿ ಹೇಳುತ್ತಿದೆ. ಹಾಗಾದ್ರೆ, ನಾಲ್ಕುವರೆ ವರ್ಷದಲ್ಲಿ 15 ಕೆರೆಗಳು ಎಲ್ಲಿಗೆ ಹೋದ್ವು ಅಂತಾ ನ್ಯಾಯಪೀಠ ಪ್ರಶ್ನೆ ಮಾಡಿದೆ.