ಪ್ರಜಾಸ್ತ್ರ ಸುದ್ದಿ
ಶಿರಸಿ: ಐದು ಸಲ ಶಾಸಕನಾಗಿ ಆಯ್ಕೆ ಆದರೂ ಮಂತ್ರಿ ಮಾಡಲಿಲ್ಲ ಎಂದು ಹೇಳಿ ಬಿಜೆಪಿಯ ಕೊಡ್ಲಗಿ ಶಾಸಕ ಎನ್.ವೈ ಗೋಪಾಲಕೃಷ್ಣ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ. ಸ್ಪೀಕರ್ ಕಾಗೇರಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿ ಮಾತನಾಡಿದರು.
ಮೊಳಕಲ್ಮೂರು, ಬಳ್ಳಾರಿ ಗ್ರಾಮೀಣ, ಕೊಡ್ಲಗಿಯಲ್ಲಿ ಬಿಜೆಪಿ, ಕಾಂಗ್ರೆಸ್ ನಿಂದ ಶಾಸಕನಾಗಿ ಸೇವೆ ಸಲ್ಲಿಸಿದ್ದೇನೆ. ಅವರು ಮಂತ್ರಿ ಮಾಡಲಿಲ್ಲ. ಇವರು ಮಾಡಲಿಲ್ಲ. ನನಗಿಂತ ಸಣ್ಣವರಿಗೆ ಸಚಿವರನ್ನಾಗಿ ಮಾಡಿ ಒಳ್ಳೆಯ ಪೋರ್ಟ್ ಪೊಲೀಯೋ ಕೊಟ್ಟಿದ್ದಾರೆ. ರಾಜೀನಾಮೆ ಕೊಡುವಾಗ ಈಗ ಎಲ್ಲರೂ ಕೇಳುತ್ತಾರೆ ಎಂದು ಅಸಮಾಧಾನ ಹೊರ ಹಾಕಿದರು.
ಧರಂ ಸಿಂಗ್ ಅವಧಿಯಲ್ಲಿ ಉಪ ಸಭಾಪತಿಯಾಗಿ, ಸಿದ್ದರಾಮಯ್ಯ ಅವಧಿಯಲ್ಲಿ ನಂಜುಡಪ್ಪ ಅನುಷ್ಠಾನ ಸಮಿತಿ ಅಧ್ಯಕ್ಷನಾಗಿ ಕಾರ್ಯ ಮಾಡಿದ್ದೇನೆ. ಅದಕ್ಕೆ ಕೃತಜ್ಞನಾಗಿದ್ದೇನೆ ಅಂತಾ ಹೇಳಿದರು.