ಮದುವೆಗೆ ಮೊದ್ಲೇ ಎಸ್ಕೇಪ್ ಆಗಿದ್ದ ವರ ವಾಪಸ್.. ಆದ್ರೆ ಸಿಂಗಲ್ ಅಲ್ಲ…

313

ಪ್ರಜಾಸ್ತ್ರ ಸುದ್ದಿ

ಮೈಸೂರು: ಕುಟುಂಬಸ್ಥರು ಅಂದುಕೊಂಡಂತೆ ಆಗಿದ್ರೆ ಬುಧವಾರ ಮದುವೆ ಸಂಭ್ರಮ ಎಲ್ಲೆಡೆ ಇರುತಿತ್ತು. ಆದ್ರೆ, ಮದುವೆಗೆ ಎರಡು ದಿನ ಮೊದ್ಲೇ ಎಸ್ಕೇಪ್ ಆಗಿದ್ದ ವರ, ವಾಪಸ್ ಆಗಿದ್ದಾನೆ. ಆದ್ರೆ, ಒಬ್ಬನೇ ಬಂದಿಲ್ಲ. ಜೊತೆಗೆ ಪ್ರೇಯಿಸಿಯನ್ನ ಕರೆದುಕೊಂಡು ಬಂದಿದ್ದಾನೆ.

ಮೈಸೂರಿನ ಸುಣ್ಣದಕೇರಿಯ ಉಮೇಶ ಹಾಗೂ ಕೆ.ಆರ್ ಮೊಹಲ್ಲಾದ ಯುವತಿಯೊಂದು ಬುಧವಾರ ಮದುವೆ ನಿಶ್ಚಿಯ ಮಾಡಲಾಗಿತ್ತು. ಆದ್ರೆ, ವರ ಎರಡು ದಿನ ಮೊದ್ಲೇ ಎಸ್ಕೇಪ್ ಆಗಿದ್ದ. ಹೀಗಾಗಿ ಮದುವೆ ಕ್ಯಾನ್ಸಲ್ ಮಾಡಲಾಗಿದೆ. ಈ ಸಂಬಂಧ ವಧುವಿನ ಕಡೆಯವರು ವರನ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಇದೀಗ ವಾಪಸ್ ಬಂದಿರುವ ಉಮೇಶ, ಪ್ರೇಯಿಸಿಗೆ ಕೆ.ಆರ್ ಪೊಲೀಸ್ ಠಾಣೆ ಹತ್ತಿರದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ತಾಳಿ ಕಟ್ಟಿದ್ದಾನೆ. ಸೋಮವಾರವೇ ಈ ಜೋಡಿ ಎಸ್ಕೇಪ್ ಆಗಿತ್ತು.




Leave a Reply

Your email address will not be published. Required fields are marked *

error: Content is protected !!