ನವರಾತ್ರಿ ನವ ರಂಗು: ಇರಲಿ ಒಂದಿಷ್ಟು ಎಚ್ಚರ

397

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇಂದಿನಿಂದ ನಾಡಿನ ತುಂಬಾ ನವರಾತ್ರಿಯ ರಂಗು ತುಂಬಿಕೊಳ್ಳುತ್ತಿದೆ. 9 ದಿನಗಳ ಕಾಲ ರಾಜ್ಯದ ಎಲ್ಲೆಡೆ ವಿಷೇಶ ಪೂಜೆ ಪುನಸ್ಕಾರ, ಆಚರಣೆಗಳು ನಡೆಯಲಿವೆ. ಹಳೆ ಮೈಸೂರು, ಬೆಂಗಳೂರು ಭಾಗದಲ್ಲಿ ಚಾಮುಂಡೇಶ್ವರಿಯ ಪೂಜೆ ನಡೆಯುತ್ತೆ. ಉತ್ತರ ಕರ್ನಾಟಕ ಭಾಗದಲ್ಲಿ ನವ ದುರ್ಗಿಯರ ಪೂಜೆ ನಡೆಯಲಿದೆ.

ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಹೆಸರಿನಿಂದ ಜಗನ್ಮಾತೆಯನ್ನ ಪೂಜಿಸಿಕೊಂಡು ಬರಲಾಗುತ್ತೆ. 9 ದಿನಗಳ ಕಾಲ ಮನೆಗಳಲ್ಲಿ ದೀಪ ಬೆಳಗಲಿದೆ. ವಿಜಯ ದಶಮಿ ದಿನದಂದ ಬನ್ನಿ ವಿನಿಮಯ ಮಾಡಿಕೊಳ್ಳುವ ಮೂಲಕ ದಸರಾ ಹಬ್ಬದ ಶುಭ ಕೋರಲಿದ್ದಾರೆ.

ಈ ಬಾರಿ ಕರೋನಾ ಎಲ್ಲ ಹಬ್ಬ ಹರಿದಿನಗಳಿಗೂ ಬರೆ ಎಳೆದಿದೆ. ಹೀಗಾಗಿ ಅತ್ಯಂತ ಸರಳ ಹಾಗೂ ಸಂಕ್ಷಿಪ್ತವಾಗಿ ಆಚರಣೆಗಳು ನಡೆಯಲಿವೆ. ಸರ್ಕಾರ ಸಹ ಜಂಬೂ ಸವಾರಿಯನ್ನ ಅರಮನೆಯ ಆವರಣಕ್ಕೆ ಸಿಮೀತ ಮಾಡಿದೆ. ಸಾರ್ವಜನಿಕರು ಸಹ ಕರೋನಾ ಮಾರ್ಗಸೂಚಿಗಳನ್ನ ಅಳ್ವಡಿಸಿಕೊಂಡು ನವರಾತ್ರಿ ಆಚರಿಸುವುದು ಒಳ್ಳೆಯದು.




Leave a Reply

Your email address will not be published. Required fields are marked *

error: Content is protected !!