ಪ್ರಧಾನಿಯತ್ತ ತೂರಿ ಬಂದ ಮೊಬೈಲ್ ಜಾಡು ಪತ್ತೆ

113

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮೈಸೂರಿನಲ್ಲಿ ರೋಡ್ ಶೋ ನಡೆಸುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರತ್ತ ತೂರಿ ಬಂದ ಮೊಬೈಲ್ ವಿಚಾರ ಸಾಕಷ್ಟು ವೈರಲ್ ಆಗಿತ್ತು. ಇದು ಭದ್ರತಾ ಲೋಪವೆಂದು ದೊಡ್ಡ ಸುದ್ದಿ ಆಯಿತು. ಇದೀಗ ಅದರ ಹಿನ್ನೆಲೆ ಪತ್ತೆಯಾಗಿದೆ.

ಮೊಬೈಲ್ ಮಾಲೀಕನಿಗೆ ಅದನ್ನು ವಾಪಸ್ ನೀಡಲಾಗಿತ್ತು. ಯಾವಾಗ ಭದ್ರತಾ ಲೋಪವೆಂದು ಸುದ್ದಿ ಆಯಿತೋ, ಆಗ ಪೊಲೀಸರು ಆತನನ್ನು ಕರೆಯಿಸಿ ವಿಚಾರಣೆ ನಡೆಸಿದರು. ಆಗ ನಂಜುಂಡೇ ರಾಜ್ ಅರಸ್ ಓರ್ವ ಯೋಗಾ ಶಿಕ್ಷಕ. ಜೊತೆಗೆ ಶಾರದಾದೇವಿ ವಾರ್ಡ್ ನ ಬಿಜೆಪಿ ಅಧ್ಯಕ್ಷ ಸಹ ಆಗಿದ್ದಾರೆ.

ಆರ್ ಎಸ್ಎಸ್ ಕಾರ್ಯಕರ್ತ ಸಹ ಆಗಿರುವ ನಂಜುಂಡೇ ರಾಜ್ ಅರಸ್, ಜೈಕಾರ ಕೂಗುತ್ತಿದ್ದಾಗ  ಹಿಂದಿನಿಂದ ಹೂ ಎಸೆಯುತ್ತಿರುವ ರಭಸಕ್ಕೆ ಮೊಬೈಲ್ ಹೋಗಿದೆ ಎಂದು ತಿಳಿದು ಬಂದಿದೆ. ಹಲವು ರೀತಿಯಲ್ಲಿ ಪರಿಶೀಲಿಸಲಾಗಿದ್ದು, ಆತಂಕ ಪಡುವಂತಹದ್ದು ಏನು ಇಲ್ಲವೆಂದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!