ರಾಕ್ಷಿಸಿ ಕೃತ್ಯವೆಸಗಿದ ಪ್ರಜ್ವಲ್ ಮೋದಿ ಪರಿವಾರದ ವ್ಯಕ್ತಿ: ಸುಪ್ರಿಯಾ ಶ್ರೀನಾಟೆ

65

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣದ ವಿರುದ್ಧ ಎಐಸಿಸಿ ಮಾಧ್ಯಮ, ಸಂವಹನ ವಿಭಾಗದ ಅಧ್ಯಕ್ಷೆ ಸುಪ್ರಿಯಾ ಶ್ರೀನಾಟೆ ವಾಗ್ದಾಳಿ ನಡೆಸಿದ್ದಾರೆ. ದೇಶದ ಯಾವುದೇ ಮಹಿಳೆಯರ ಮೇಲೆ ಶೋಷಣೆ ನಡೆದರೂ ಪ್ರಧಾನಿ ಮೋದಿ ಕಣ್ಣಿಗೆ ಕಾಣುವುದಿಲ್ಲ. ರಾಕ್ಷಿಸಿ ಕೃತ್ಯವೆಸಿದ ಪ್ರಜ್ವಲ್ ಮೋದಿ ಪರಿವಾರದ ವ್ಯಕ್ತಿ ಎಂದಿದ್ದಾರೆ.

ಈತ ಎಸಗಿರುವ ಕೃತ್ಯ ನೋಡಿದರೆ ಆಘಾತವಾಗುತ್ತೆ. ಸಾವಿರಾರು ಮಹಿಳೆಯರ ಮೇಲೆ ತಾನೇ ಎಸಗಿರುವ ಕೃತ್ಯವನ್ನು ಚಿತ್ರೀಕರಣ ಮಾಡಿಕೊಂಡಿದ್ದಾನೆ. ಇದು ಲೈಂಗಿಕ ಹಗರಣವಲ್ಲ. ದೇಶದ ದೊಡ್ಡ ಅತ್ಯಾಚಾರ ಪ್ರಕರಣ.

ಪ್ರಿಯಾಂಕಾ ಗಾಂಧಿ ಮಗಳು ಭೇಟಿಯಾಗಲು ವಿದೇಶಕ್ಕೆ ಹೋಗುವುದು ಬಿಜೆಪಿಯವರಿಗೆ ಗೊತ್ತಾಗುತ್ತೆ. ಇಷ್ಟು ದೊಡ್ಡ ಆರೋಪಿ ವಿದೇಶಕ್ಕೆ ಹೋಗುವುದು ಗೊತ್ತಾಗುವುದಿಲ್ಲವೇ? ನೀಚ ವ್ಯಕ್ತಿ ಮನೆ ಕೆಲಸದವರು, ಜನಪ್ರತಿನಿಧಿಗಳು, ಕಾರ್ಯಕರ್ತರು, ಸರ್ಕಾರಿ ನೌಕರರ ಮೇಲೆ ದೌರ್ಜನ್ಯವೆಸಗಿದ್ದಾನೆ. ಮೈಸೂರಿನ ಸಾರ್ವಜನಿಕ ಸಭೆಯಲ್ಲಿ ಈತನ ಕೈ ಹಿಡಿಯುವ ಮೋದಿಗೆ ನಾಚಿಕೆಯಾಗಬೇಕು ಎಂದು ಕಿಡಿ ಕಾರಿದ್ದಾರೆ.




Leave a Reply

Your email address will not be published. Required fields are marked *

error: Content is protected !!