ಪ್ರಜಾಸ್ತ್ರ ಸುದ್ದಿ
ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಪ್ರಾರ್ಥಿವ ಶರೀರ ಮೆರವಣಿಗೆ ವೇಳೆ ನಡೆದ ಗಲಾಟೆಯ ಸಂದರ್ಭದಲ್ಲಿ ಲಾಠಿ ಚಾರ್ಜ್ ಮಾಡಲಾಗಿತ್ತು. ಈ ಸಂಬಂಧ ಬೆಳ್ಳಾರೆ ಹಾಗೂ ಸುಬ್ರಮಣ್ಯ ಠಾಣೆ ಪಿಎಸ್ಐ ಅವರನ್ನು ವರ್ಗಾವಣೆ ಮಾಡಲಾಗಿದೆ.
ಬೆಳ್ಳಾರೆ ಠಾಣೆ ಪಿಎಸ್ಐ ರುಕ್ಮ್ ನಾಯ್ಕ್, ಸುಬ್ರಮಣ್ಯ ಠಾಣೆ ಪಿಎಸ್ಐ ಜಂಬೂ ರಾಜ್ ಮಹಾಜನ್ ಅವರನ್ನು ಐಜಿಪಿ ಕಚೇರಿಗೆ ವರ್ಗಾವಣೆ ಮಾಡಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿರೆ ಆದೇಶಿಸಿದ್ದಾರೆ.
ಕುಂದಾಪುರ ಠಾಣೆಯ ಪಿಎಸ್ಐ ಸುಹಾಸ್ ಬೆಳ್ಳಾರೆ ಠಾಣೆಗೆ, ವಿಟ್ಲಾ ಠಾಣೆ ಪಿಎಸ್ಐ ಮಂಜುನಾಥ್.ಟಿ ಸುಬ್ರಮಣ್ಯ ಠಾಣೆಗೆ ನೇಮಕ ಮಾಡಲಾಗಿದೆ.