ಪ್ರಜಾಸ್ತ್ರ ಸುದ್ದಿ
ಮುಂಬೈ: ಭಾನುವಾರ ಪುಣೆಯಲ್ಲಿ ನಡೆದ ಐಷಾರಾಮಿ ಪೋಶೆ ಕಾರು ಅಪಘಾತದ ಬಾಲ ಆರೋಪಿಗೆ ಯರವಾಡ ಪೊಲೀಸರು ಪಿಜ್ಜಾ, ಬರ್ಗರ್ ತರೆಸಿಕೊಟ್ಟಿದ್ದಾರೆ ಎಂದು ವಕೀಲರು ಹಾಗೂ ವಂಚಿತ್ ಬಹುಜನ್ ಅಘಾಡಿ ಪಕ್ಷದ ಅಧ್ಯಕ್ಷರಾಗಿರುವ ಪ್ರಕಾಶ್ ಅಂಬೇಡ್ಕರ್ ಆರೋಪಿಸಿದ್ದಾರೆ.
ಪೊಲೀಸರು ಅಪಘಾತದಲ್ಲಿ ಮೃತರಾದ ಬೈಕ್ ಸವಾರರಾದ ಅನೀಶ್ ಹಾಗೂ ಅಶ್ವಿನಿ ನಡುವಿನ ಸಂಬಂಧದ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಸಮಯ ಕಳೆದಿದ್ದಾರೆ. ಕಾರು ಶೋರೂಮಿನಿಂದ ರಿಜಿಸ್ಟರ್ ನಂಬರ್ ಇಲ್ಲದೆ ಹೊರಗೆ ಹೇಗೆ ಬಂದಿದೆ. ಟ್ರಾಫಿಕ್ ಪೊಲೀಸರು ಏನು ಮಾಡುತ್ತಿದ್ದರು. 8 ಗಂಟೆಯ ಬಳಿಕ ಮದ್ಯಪಾನ ಮಾಡಿರುವ ಬಗ್ಗೆ ಪರೀಕ್ಷೆ ಮಾಡಿದ್ಯಾಕೆ? ಬಾಲ ನ್ಯಾಯಾಲಯ ಕಸ್ಟಡಿಗೆ ಆರೋಪಿ ಹೋಗದೆ ಜಾಮೀನು ಸಿಕ್ಕಿದ್ದು ಹೇಗೆ ಎಂದಿದ್ದಾರೆ.
ಈ ವ್ಯವಸ್ಥೆ ಬಡವರಿಗೆ ಹಾಗೂ ಶ್ರೀಮಂತರಿಗೆ ಹೇಗಿದೆ ನೋಡಿ. ಉಪ ಮುಖ್ಯಮಂತ್ರಿ ದೇವೀಂದ್ರ ಫಡ್ನಾವಿಸ್ ಸಂತ್ರಸ್ಥರಿಗೆ ನ್ಯಾಯ ಕೊಡಲಾ ಅಥವ ಬಿಲ್ಡರ್ ಮಗನ ರಕ್ಷಣೆಗೆ ಹೋಗಿದ್ದರಾ ಎಂದು ಪ್ರಶ್ನಿಸಿದ್ದಾರೆ.