ಕೊಹ್ಲಿಗೆ ಬೆದರಿಕೆ, ಹೆಚ್ಚಿದ ಭದ್ರತೆ

105

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಇಂಡಿಯನ್ ಕ್ರಿಕೆಟ್ ಟೀಂನ ಸ್ಟಾರ್ ಪ್ಲೇಯರ್, ಆರ್ ಸಿಬಿ ತಂಡದ ಮೇನ್ ಪಿಲ್ಲರ್ ಆಗಿರುವ ವಿರಾಟ್ ಕೊಹ್ಲಿಗೆ ಬೆದರಿಕೆ ಹಾಕಲಾಗಿರುವ ಘಟನೆ ಬೆಳಕಿಗೆ ಬಂದಿದೆ. ಹೀಗಾಗಿ ಇಂದು ನಡೆಯಬೇಕಿದ್ದ ಅಭ್ಯಾಸ ಪಂದ್ಯ ನಡೆದಿಲ್ಲ. ಅಲ್ಲದೇ ಪಂದ್ಯಕ್ಕೂ ಮೊದಲು ನಡೆಯುವ ಸುದ್ದಿಗೋಷ್ಠಿ ಸಹ ನಡೆದಿಲ್ಲ.

ಗುಜರಾತಿನ ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಸಂಜೆ 7.30ಕ್ಕೆ ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪಂದ್ಯ ನಡೆಯಲಿದೆ. ಆದ್ರೆ, ಬೆಳವಣಿಗೆಯಿಂದ ಆತಂಕ ಮೂಡಿದೆ. ಹೀಗಾಗಿ ಭದ್ರತೆಯ ವಿಚಾರ ತುಂಬಾ ಮುಖ್ಯವಾಗಿದೆ.

ಆರ್ ಸಿಬಿ ತಂಡ ಉಳಿದುಕೊಂಡಿರುವ ಹೋಟೆಲ್ ಸುತ್ತಮುತ್ತು ಬಿಗಿ ಬಂದೋಬಸ್ತಿ ಮಾಡಲಾಗಿದೆ. ಹೋಟೆಲ್ ನಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಐಪಿಎಲ್ ಮಾನ್ಯತೆ ಹೊಂದಿದವರಿಗೂ ಒಳಗೆ ಬಿಡುತ್ತಿಲ್ಲ. ಸಂಜೆ ನಡೆಯುವ ಪಂದ್ಯಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಅದರಲ್ಲೂ ಪ್ರಧಾನಿ ಮೋದಿ ತವರು ರಾಜ್ಯದಲ್ಲಿ ಅವರದೆ ಹೆಸರಿನ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ. ಕಳೆದ ಎರಡ್ಮೂರು ದಿನಗಳ ಹಿಂದೆ ಶ್ರೀಲಂಕಾ ಮೂಲದ ನಾಲ್ವರು ಶಂಕಿತ ಐಸಿಸ್ ಉಗ್ರರರನ್ನು ವಶಕ್ಕೆ ಪಡೆಯಲಾಗಿದೆ. ಇದ್ದರಿಂದಾಗಿ ಸಾಕಷ್ಟು ಆತಂಕ ಮನೆ ಮಾಡಿದೆ.




Leave a Reply

Your email address will not be published. Required fields are marked *

error: Content is protected !!