ಪ್ರಜಾಸ್ತ್ರ ಸುದ್ದಿ
ಮೈಸೂರು: ಕೋವಿಡ್ 3ನೇ ಆರಂಭದ ಹೊತ್ತಿನಲ್ಲಿ ಮಕ್ಕಳಿಗೆ ಪರೀಕ್ಷೆ ನಡೆಸಿದ್ರೆ ಅವರ ಕಥೆ ಏನು? ತಾನು ಹೇಳಿದ್ದೆ ನಡೆಯಬೇಕು ಅನ್ನೋ ಅಹಂನಲ್ಲಿ ಸರ್ಕಾರ ಮಕ್ಕಳನ್ನ ಮರೆತಿದೆ ಎಂದು, ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ ಕಿಡಿ ಕಾರಿದ್ದಾರೆ.
ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ ತನ್ವೀರ್ ಸೇಠ್, ಕಾಗೇರಿ, ನಾನು ಇದ್ದೇವೆ. ಶಿಕ್ಷಣ ಇಲಾಖೆಯಲ್ಲಿ ಆಯುಕ್ತರಾಗಿ, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಹಿರಿಯ ಅಧಿಕಾರಿಗಳಿದ್ದಾರೆ. ಯಾರ ಅಭಿಪ್ರಾಯವನ್ನ ಕೇಳದೆ, ಪರೀಕ್ಷೆ ನಡೆಸಿ ಮಕ್ಕಳನ್ನ ಸಾಯಿಸಬೇಕು ಅಂದುಕೊಂಡಿದ್ದೀರಾ ಅಂತಾ ಕಿಡಿ ಕಾರಿದರು.
ಕೇಂದ್ರ ಸರ್ಕಾರವೇ ದೊಡ್ಡ ದೊಡ್ಡ ಪರೀಕ್ಷೆಗಳನ್ನ ರದ್ದುಗೊಳಿಸಿದೆ. ಆದ್ರೆ, ಶಿಕ್ಷಣ ಸಚಿವರು ಯಾವ ಹಠಕ್ಕೆ ಬಿದ್ದಿದ್ದಾರೆ. ಮಕ್ಕಳ ಜೀವ ಹಾಗೂ ಜೀವನ ತೆಗೆಯಲು ಶಿಕ್ಷಣ ಸಚಿವ ಸುರೇಶಕುಮಾರ ಈ ರೀತಿ ಮಾಡ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.