ತಳವಾರ ಮಹಾಸಭಾ ನೌಕರರ ಸಂಘದ ಮುಖಂಡ ರಮಗಾಗೆ ಸನ್ಮಾನ

614

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಬೆಂಗಳೂರಿನ ತಳವಾರ ಮಹಾಸಭಾ ನೌಕರರ ಸಂಘದ ಮುಖಂಡರಾದ ಸಿದ್ದು ರಮಗಾ ಅವರನ್ನು ಪಟ್ಟಣದಲ್ಲಿ ಮಂಗಳವಾರ ಸಂಜೆ, ತಾಲೂಕು ತಳವಾರ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯನಿಮಿತ್ತ ಆಗಮಿಸಿದ್ದ ವೇಳೆ ಅವರನ್ನು ಸಂಘದ ಪದಾಧಿಕಾರಿಗಳು ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿದ್ದು ರಮಗಾ ಅವರು, ಸಾಕಷ್ಟು ಹೋರಾಟದ ಫಲವಾಗಿ ತಳವಾರ ಸಮಾಜಕ್ಕೆ ಎಸ್ಟಿ ಪ್ರಮಾಣ ಪತ್ರ ಸಿಕ್ಕಿದೆ. ಇದಕ್ಕಾಗಿ ಸಾಕಷ್ಟು ನಾಯಕರು ಶ್ರಮಿಸಿದ್ದಾರೆ. ದಶಕಗಳ ಕಾಲದ ನಮ್ಮ ಕಷ್ಟಕ್ಕೆ ಇದೀಗ ಮುಕ್ತಿ ಸಿಕ್ಕಂತಾಗಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಸಮಾಜದ ಕೆಲಸದಲ್ಲಿ ನನ್ನ ಅಳಿಲು ಸೇವೆ ಗುರುತಿಸಿ ತಳವಾರ ನೌಕರರ ಸಂಘ ಪ್ರೀತಿಯಿಂದ ಗೌರವಿಸಿದ್ದಕ್ಕೆ ಧನ್ಯವಾದಗಳು ಎಂದರು.

ಈ ವೇಳೆ ತಳವಾರ ನೌಕರರ ಸಂಘದ ಗೌರವ ಅಧ್ಯಕ್ಷ ಎಂ.ಸಿ ಯರನಾಳ, ಅಧ್ಯಕ್ಷ ರಾಜು ನರಗೋದಿ, ಪ್ರಧಾನ ಕಾರ್ಯದರ್ಶಿ ಭರತೇಶ ಹಿರೋಳ್ಳಿ, ಸಹ ಕಾರ್ಯದರ್ಶಿ ಎಚ್.ಎಸ್ ನಾಗಣಸೂರ, ಸದಸ್ಯರಾದ ಎಸ್.ಬಿ ಹಿಪ್ಪರಗಿ, ಎಂ.ಜಿ ನಾಯ್ಕೋಡಿ, ಹೂನಹಳ್ಳಿ, ಶಂಕರ ವಾಲೀಕಾರ, ಶೇಖರ ಬೂದಿಹಾಳ, ಪ್ರಜಾಸ್ತ್ರ ವೆಬ್ ಪತ್ರಿಕೆ ಸಂಪಾದಕ ನಾಗೇಶ ತಳವಾರ ಸೇರಿ ಇತರರು ಉಪಸ್ಥಿತರಿದ್ದರು. ಖಜಾಂಚಿ ಬಿ.ಎಸ್ ಬೂದಿಹಾಳ ನಿರೂಪಿಸಿದರು. ಸದಸ್ಯ ಸಂಜೀವಕುಮಾರ ಡಾಂಗಿ ವಂದಿಸಿದರು.




Leave a Reply

Your email address will not be published. Required fields are marked *

error: Content is protected !!