ನವದೆಹಲಿ: ಇವಿಎಂ ಟ್ರ್ಯಾಕಿಂಗ್ ಆಗಿದೆ ಅಂತಾ ಹೇಳಿ 21 ಪ್ರತಿಪಕ್ಷಗಳು ಚುನಾವಣಾ ಆಯೋಗವನ್ನು ಇಂದು ಭೇಟಿ ಮಾಡಲು ನಿರ್ಧರಿಸಿವೆ. ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಸಿಪಿಎಂ ನಾಯಕ ಸೀತಾರಂ ಯಚೂರಿ, ಕಾಂಗ್ರೆಸ್ ಲೀಡರ್ ಅಭಿಷೇಕ್ ಮನು ಸಿಂಘ್ವಿ, ಅಹ್ಮದ್ ಪಟೇಲ್ ಸೇರಿದಂತೆ ಉಳಿದ ಪಕ್ಷಗಳ ನಾಯಕರು ಇಂದು ದೆಹಲಿಯಲ್ಲಿ ಭೇಟಿಗೆ ನಿರ್ಧರಿಸಿದ್ದಾರೆ.
ಫಲಿತಾಂಶ ಘೋಷಣೆಗೆ ಕೇವಲ ಎರಡು ದಿನ ಬಾಕಿ ಇರುವ ಹೊತ್ತಿನಲ್ಲಿಯೇ ಈ ತೀರ್ಮಾನಕ್ಕೆ ಬಂದಿದ್ದಾರೆ. ವಿವಿಪ್ಯಾಟ್ ಮತ್ತು ಇವಿಎಂಗಳಲ್ಲಿ ಹೊಂದಾಣಿಕೆ ಇಲ್ಲ. ಹೀಗಾಗಿ ಎಲ್ಲ ವಿವಿಪ್ಯಾಟ್ ಗಳನ್ನು ಎಣಿಸಿಬೇಕು. ಒಂದೇ ಒಂದು ಮತ ಸಹ ಹೊಂದಾಣಿಕೆಯಿಲ್ಲದಂತೆ ನೋಡಿಕೊಳ್ಳಬೇಕಾಗಿದೆ ಅಂತಾ ಹೇಳಿವೆ.