ಪರಿಪೂರ್ಣ ಚುನಾವಣೆ : ಪ್ರಣಬ್ ಮುಖರ್ಜಿ

373

ನವದೆಹಲಿ: ವಿರೋಧ ಪಕ್ಷಗಳ ಟೀಕಾಸ್ತ್ರದ ನಡುವೆಯೂ, ಕೇಂದ್ರ ಚುನಾವಣಾ ಆಯೋಗ ತನ್ನ ಕೆಲಸವನ್ನು ಪರಿಪೂರ್ಣವಾಗಿ ಮಾಡಿದೆ ಅಂತಾ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. 2019ರ ಲೋಕಸಭಾ ಚುನಾವಣೆ ತುಂಬಾ ಅಚ್ಚುಕಟ್ಟಾಗಿ ನಡೆದಿದೆ. ಅವರನ್ನು ನೀವು ಬೈಯಬೇಡಿ. ಪ್ರಜಾಪ್ರಭುತ್ವದ ಕಾರ್ಯ ಯಶಸ್ವಿಯಾಗಿದೆ ಅಂತಾ ಹೇಳಿದ್ದಾರೆ.

ಎಲೆಕ್ಷನ್ ಘೋಷಣೆ ಆದ್ಮೇಲೆ ನೀತಿಸಂಹಿತೆ ಜಾರಿಯಲ್ಲಿರುತ್ತೆ. ಈ ಟೈಂನಲ್ಲಿ ರಾಜಕೀಯ ನೇತಾರರು ಸಾಕಷ್ಟು ಬಾರಿ ಅದನ್ನು ಉಲ್ಲಂಘಿಸಿದರು. ಈ ಬಗ್ಗೆ ಪ್ರತಿಯೊಂದು ಪಕ್ಷಗಳು ಕೆಸರೆರಚಾಟ ನಡೆಸಿದ್ವು. ಈ ವಿಷಯದಲ್ಲಿ ಚುನಾವಣಾ ಆಯೋಗವನ್ನ ಸಹ ಟೀಕಿಸಲಾಯ್ತು. ಆದರೆ, ಅವರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದ್ದಾರೆ. ಪಶ್ಚಿಮ ಬಂಗಾಳ ಗಲಭೆ ವಿಚಾರದಲ್ಲಿಯೂ ಸರಿಯಾಗಿ ನಡೆದುಕೊಂಡಿದ್ದಾರೆ ಅಂತಾ ಪ್ರಣಬ್ ಮುಖರ್ಜಿ ಹೇಳಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!