ನೀರಿನಲ್ಲಿ ಮುಳಗಿದವನ ರಕ್ಷಣೆಗೆ ಹೋದವರು ಸೇರಿ ನಾಲ್ವರ ಸಾವು

194

ಪ್ರಜಾಸ್ತ್ರ ಸುದ್ದಿ

ಬಾಗಲಕೋಟೆ: ನೀರಿನಲ್ಲಿ ಮುಳುಗಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಲು ಹೋಗಿದ್ದ ಮೂವರು ಸಹ ಮೃತಪಟ್ಟ ದುರಂತ ಜಿಲ್ಲೆಯ ಧನ್ನೂರ ಹತ್ತಿರದ ನಾರಾಯಣಪುರ ಡ್ಯಾಂ ಹಿನ್ನೀರಿನಲ್ಲಿ ನಡೆದಿದೆ. ಶಿವಪ್ಪ, ಇವನ ಪುತ್ರ ಯಮನಪ್ಪ, ಅಳಿಯ ಶರಣಗೌಡ ಹಾಗೂ ಪರಶುರಾಮ್ ಎಂಬುವರು ಮೃತಪಟ್ಟಿದ್ದಾರೆ.

ಶಿವಪ್ಪ ನೀರಿನಲ್ಲಿ ಮುಳಗಿದ್ದಾನೆ. ಇವನ ರಕ್ಷಣೆಗೆ ಬೋಟ್ ಮೂಲಕ ಹೋಗಿದ್ದಾಗ ವಿದ್ಯುತ್ ತಂತಿ ತಗುಲಿ ದುರಂತ ಸಂಭವಿಸಿದೆ. ಹೀಗಾಗಿ ಶಿವಪ್ಪನ ಪುತ್ರ, ಅಳಿಯ ಹಾಗೂ ಬೋಟ್ ಆಪರೇಟರ್ ಮೃತಪಟ್ಟಿದ್ದಾರೆ. ಇನ್ನಿಬ್ಬರು ಈಜಿ ದಡ ಸೇರಿದ್ದಾರೆ. ಹುನಗುಂದ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!