ಮೂವರು ಸ್ನೇಹಿತರ ಎಣ್ಣೆ ಪಾರ್ಟಿ, ಓರ್ವನ ಹತ್ಯೆ ನಡೆದಿದ್ದು ಗೊತ್ತೇ ಇಲ್ವಂತೆ!

138

ಪ್ರಜಾಸ್ತ್ರ ಅಪರಾಧ ಸುದ್ದಿ

ಗದಗ: ಕಳೆದ ಮೂವರು ಸ್ನೇಹಿತರು ಕೂಡಿಕೊಂಡು ಎಣ್ಣೆ ಪಾರ್ಟಿ ಮಾಡಿದ್ದಾರೆ. ನಂತರ ಅಲ್ಲೆ ಮಲಗಿದ್ದಾರೆ. ಮಧ್ಯರಾತ್ರಿ ಓರ್ವನ ಕೊಲೆಯಾಗಿದೆ. ಇದು ಉಳಿದಿಬ್ಬರು ಸ್ನೇಹತರಿಗೆ ಗೊತ್ತೇ ಆಗಿಲ್ಲವೆಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಮುಂಡರಗಿ ಪಟ್ಟಣದಲ್ಲಿದೆ.

ಹೈದರ್ ನಗರ ತಾಂಡಾದ ನಿವಾಸಿ ಸುಭಾಷ್ ನಾಯಕ(23) ಕೊಲೆಯಾದ ಯುವಕ. ತಾಂಡಾದ ಮೂವರು ಸ್ನೇಹಿತರು ಊರ ಹೊರವಲಯದಲ್ಲಿ ಕಳೆದ ರಾತ್ರಿ ಎಣ್ಣೆ ಪಾರ್ಟಿ ಮಾಡಿ ಅಲ್ಲೇ ಮಲಗಿದ್ದಾರೆ. ಮಧ್ಯರಾತ್ರಿ ಎಚ್ಚರವಾಗಿ ನೋಡಿದಾಗ ಸುಭಾಷ್ ಕೊಲೆಯಾಗಿದ್ದಾನೆ. ಗಾಬರಿಯಿಂದ ತಾಂಡಾಕ್ಕೆ ಬಂದು ವಿಷಯ ತಿಳಿಸಿದ್ದಾರೆ.

ಬಿಯರ್ ಬಾಟಲ್ ನಿಂದ ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ. ಜೊತೆಗಿದ್ದವರು ನೀಡುತ್ತಿದ್ದ ಹೇಳಿಕೆ ಗೊಂದಲ ಮೂಡಿಸುತ್ತಿದೆಯಂತೆ. ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!