ಇಬ್ಬರು ರೌಡಿ ಶೀಟರ್ ಗಳ ಹತ್ಯೆ, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ

87

ಪ್ರಜಾಸ್ತ್ರ ಅಪರಾಧ ಸುದ್ದಿ

ಶಿವಮೊಗ್ಗ: ನಡು ರಸ್ತೆಯಲ್ಲಿಯೇ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಇಬ್ಬರು ರೌಡಿ ಶೀಟರ್ ಗಳ ಹತ್ಯೆ ಬುಧವಾರ ಲಷ್ಕರ್ ಮೊಹಲ್ಲಾ ಸರ್ಕಲ್ ಹತ್ತಿರ ನಡೆದಿದೆ. ತುಂಗಾನಗರದ ಸೊಹೈಲ್(35) ಹಾಗೂ ದೊಡ್ಡಪೇಟೆಯ ಮೊಹಮ್ಮದ್ ಗೌಸ್(30) ಹತ್ಯೆಯಾದ ರೌಡಿ ಶೀಟರ್ ಗಳು.

ರೌಡಿ ಶೀಟರ್ ಯಾಸೀನ್ ಖುರೇಷಿ ಮೇಲೆ ದಾಳಿ ಮಾಡಲು ಬಂದ ಇಬ್ಬರು ರೌಡಿ ಶೀಟರ್ ಮೇಲೆ ಆತನ ಗ್ಯಾಂಗ್ ಮನಬಂದಂತೆ ಹಲ್ಲೆ ಮಾಡಿದೆ. ಲಾಂಗು, ಮಚ್ಚು, ಬ್ಯಾಟ್ ಗಳಿಂದ ದಾಳಿ ಮಾಡಿ ಹತ್ಯೆ ಮಾಡಿ ಪರಾರಿಯಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಯಾಸೀನ್ ಖುರೇಷಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಗರದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಪೊಲೀಸ್ ಬಂದೋಬಸ್ತಿ ಮಾಡಲಾಗಿದೆ. ಯಾವ ಕಾರಣಕ್ಕೆ ಈ ದಾಳಿ ನಡೆದಿದೆ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!