ನವದೆಹಲಿ: ಇಂದು 87ನೇ ವಾಯುಸೇನಾ ದಿನಾಚರಣೆಯನ್ನ ಆಚರಣೆ ಮಾಡಲಾಗ್ತಿದೆ. ಭೂಸೇನೆಯ ಮುಖ್ಯಸ್ಥ ಬಿಪಿನ್ ರಾವತ್, ವಾಯುಸೇನೆಯ ಮುಖ್ಯಸ್ಥ ಆರ್ ಕೆಎಸ್ ಭದೌರಿಯಾ ಹಾಗೂ ನೌಕಾಪಡೆಯ ಮುಖ್ಯಸ್ಥ ಕರಂಬೀರ ಸಿಂಗ್ ರಾಷ್ಟ್ರೀಯ ಯುದ್ಧ ಸ್ಮಾರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ್ರು.
ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ವಾಯುಪಡೆ ಅತ್ಯಂತ ಶ್ರೇಷ್ಠತೆ ಹಾಗೂ ಸಮರ್ಪಾಣೆಯಿಂದ ದೇಶ ಸೇವೆ ಮಾಡಿದೆ. ಯೋಧರಿಗೆ ಅವರ ಕುಟುಂಬಕ್ಕೆ ಕೃತಜ್ಞತೆ ಅಂತಾ ಹೇಳಿದ್ದಾರೆ. ಇನ್ನು ದೆಹಲಿಯ ಹಿಂದಾನ್ ಬೇಸ್ ನಲ್ಲಿ ಆಧುನಿಕ ಹಾಗೂ ವಿಂಟೆಜ್ ಯುದ್ಧ ವಿಮಾನಗಳ ಪ್ರದರ್ಶನ ನಡೆಯುತ್ತಿದೆ.