ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಂಜಾನ್ ಸಾರ್ವತ್ರಿಕ ರಜೆಯಲ್ಲಿ ಸರ್ಕಾರ ಬದಲಾವಣೆ ಮಾಡಿದೆ. ಮುಸ್ಲಿಂರ ಪವಿತ್ರ ಹಬ್ಬ ರಂಜಾನ್ ಮಂಗಳವಾರ ಮುಕ್ತಾಯವಾಗಿದೆ. ಒಂದು ತಿಂಗಳಿಂದ ಮಾಡಿಕೊಂಡು ಬರುತ್ತಿರುವ ಉಪವಾಸ ಮಂಗಳವಾರ ಮುಗಿಯಲಿದೆ. ಹೀಗಾಗಿ ಕ್ಯಾಲೆಂಡರ್ ನಲ್ಲಿ ಮೇ 3ರಂದು ಸಾರ್ವತ್ರಿಕ ರಜೆಯೆಂದು ನೀಡಲಾಗಿದೆ. ಆದರೆ, ಸರ್ಕಾರ ರಜೆಯಲ್ಲಿ ಬದಲಾವಣೆ ಮಾಡಿದೆ.
ಮಂಗಳವಾರ ರಜೆ ಬದಲು ಸೋಮವಾರ ರಜೆ ನೀಡಿ ಘೋಷಿಸಲಾಗಿದೆ. ಈ ಮೂಲಕ ಮೇ 2ರಂದು ಸರ್ಕಾರಿ ರಜೆ ನೀಡಲಾಗಿದೆ. ಇನ್ನು ಮೇ 3 ಬಸವ ಜಯಂತಿ ರಜೆ ಇದೆ. ಆದರೆ, ಮುಸ್ಲಿಂರು 29 ದಿನ ಉಪವಾಸ ಮಾಡಿದ ನಂತರ ಮೂನ್ ಕಮಿಟಿ ಸಂಜೆ ಸಭೆ ನಡೆಸಿ, ರಂಜಾನ್ ಯಾವಾಗ ಎಂದು ಘೋಷಿಸಲಾಗುತ್ತೆ. ಆದರೆ, ಇದೀಗ ಸರ್ಕಾರ ಹೊರಡಿಸಿರುವ ಆದೇಶ ಗೊಂದಲ ಮೂಡಿಸಿದೆ. ಆದರೆ, ರಂಜಾನ್ ಮಂಗಳವಾರ ನಡೆಯೋದು ಬಹುತೇಕ ಎನ್ನಲಾಗುತ್ತಿದೆ.