ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ವಿದ್ಯುತ್ ಸ್ಪರ್ಶಿಸಿದ್ದರಿಂದ ತಂದೆ, ಮಗ ಮೃತಪಟ್ಟ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಪ್ರಭು ಹುಂಬಿ(68) ಹಾಗೂ ಮಗ ಮಂಜುನಾಥ(29) ಮೃತಪಟ್ಟ ದುರ್ದೈವಿಗಳು.
ಮನೆ ಮುಂದಿನ ವಿದ್ಯುತ್ ಕಂಬಕ್ಕೆ ಮೇನ್ ಲೈನ್ ವಿದ್ಯುತ್ ತಂತಿ ಜೋಡಿಸಲಾಗಿದೆ. ಇದನ್ನು ಗುರುತಿಸದ ಪ್ರಭು, ಅದರ ಸುತ್ತ ಬೆಳೆದಿದ್ದ ಹುಲ್ಲು ತೆಗೆಯಲು ಹೋಗಿದ್ದಾರೆ. ಆಗ ಶಾಕ್ ಹೊಡೆದಿದೆ. ಇವರನ್ನು ಕಾಪಾಡಲು ಬಂದ ಮಗ ಮಂಜುನಾಥನಿಗೂ ವಿದ್ಯುತ್ ತಗುಲಿದೆ.
ತಂದೆ ಹಾಗೂ ಮಗನ ಸಾವಿನಿಂದ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಇವರ ಸಾವಿಗೆ ಹೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯವೇ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.