ಪ್ರಜಾಸ್ತ್ರ ಸುದ್ದಿ
ತಿರುವನಂತಪುರಂ: ಪ್ರೀತಿಸಿ ಮದುವೆಯಾಗುತ್ತಿದ್ದ ಯುವಕ ಅತಿಯಾದ ವರದಕ್ಷಿಣೆ ಕೇಳಿದ ಪರಿಣಾಮ, ಇದರಿಂದ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. ಡಾ.ಶಹಾನಾ ಮೃತ ಯುವತಿ.
ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಸ್ನಾತಕೋತ್ತರ ಅಭ್ಯಾಸ ಮಾಡುತ್ತಿದ್ದ ಶಹಾನಾ, ಡಾ.ರುವೈಸಾ ಎನ್ನುವ ಯವಕನನ್ನು ಪ್ರೀತಿಸುತ್ತಿದ್ದಳು. ಕುಟುಂಬಸ್ಥರೊಂದಗಿನ ಮದುವೆ ಮಾತುಕತೆ ವೇಳೆ ಭೂಪ ಬರೋಬ್ಬರಿ 15 ಎಕರೆ ಜಮೀನು, 150 ಗ್ರಾಂ ಚಿನ್ನ ಹಾಗೂ ಬಿಎಂಡಬ್ಲು ಕಾರು ಕೇಳಿದ್ದಾನೆ. ಇದನ್ನು ನೀಡಲು ಸಾಧ್ಯವಿಲ್ಲ ಎಂದಾಗ ಮದುವೆ ನಿರಾಕರಿಸಿದ್ದಾನೆ.
ಘಟನೆಯಿಂದ ಮನನೊಂದ ಯುವತಿ ಶಹಾನಾ, ಎಲ್ಲರಿಗೂ ಹಣ ಮಾತ್ರ ಬೇಕು ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸರ್ಕಾರ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಡಿಸೆಂಬರ್ 14ರೊಳಗೆ ರಾಜ್ಯ ಅಲ್ಪಸಂಖ್ಯಾತ ಆಯೋಗದ ಎದುರು ವರದಿ ಸಲ್ಲಿಸುವಂತೆ ಸೂಚಿಸಿದೆ.