ಶಿವಮೊಗ್ಗ: ಮುಂದಿನ ಮೂರು ವರ್ಷಗಳಲ್ಲಿ ಸರ್ಕಾರಿ ಶಾಲೆ ಮುಂದೆ ಪೋಷಕರು ಕ್ಯೂ ನಿಲ್ಲುವಂತೆ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಸುರೇಶಕುಮಾರ ಹೇಳಿದ್ದಾರೆ. ಸಾಗರ ತಾಲೂಕು ಕೆಳದಿಯ ಸರ್ಕಾರಿ ಶಾಲೆಯ ಶತಮಾನೋತ್ಸವ ಸಂಭ್ರಮದಲ್ಲಿ ಭಾಗವಹಿಸಿ ಮಾತ್ನಾಡಿದ್ರು.
ಒಂದು ಶಾಲೆ ಶತಮಾನೋತ್ಸವ ಪೂರೈಯಿಸುವುದು ಅಂದ್ರೆ ಸಾಮಾನ್ಯ ಸಂಗತಿ ಅಲ್ಲ. ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ಎಲ್ಲ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಯಾಕಂದ್ರೆ, ಮಕ್ಕಳ ಶಿಕ್ಷಣಕ್ಕಾಗಿ ಪೋಷಕರು ಶೇಕಡ 40 ರಷ್ಟು ಆದಾಯ ಖರ್ಚು ಮಾಡ್ತಿದ್ದಾರೆ. ಇದು ಉಳಿತಾಯವಾಗಬೇಕು ಎಂದರು.
ಇನ್ಫೋಸಿಸ್ ಸಂಸ್ಥೆಯ ಸುಧಾಮೂರ್ತಿ ಅವರು ಒಂದು ಸಾವಿರ ಶಾಲೆಗಳಿಗೆ ಸ್ಮಾರ್ಟ್ ರೂಮ್ ನಿರ್ಮಿಸಿ ಕೊಡುವುದು, 1 ಸಾವಿರ ಶಿಕ್ಷಕರಿಗೆ ವಿಜ್ಞಾನ ವಿಷಯದಲ್ಲಿ ತರಬೇತಿ ಹಾಗೂ 10 ಸರ್ಕಾರಿ ಶಾಲೆಗಳಲ್ಲಿ ಸುಸಜ್ಜಿತ ಗ್ರಂಥಾಲಯ ನಿರ್ಮಿಸಲು ಸಮ್ಮಿತಿ ಸೂಚಿಸಿದ್ದು, ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಅಂತಾ ಹೇಳಿದ್ರು.