ಇಂದಿನಿಂದ 2 ತಿಂಗಳ ರೇಷನ್ ವಿತರಣೆ

339

ಬೆಂಗಳೂರು: ಇಂದಿನಿಂದ ಏಪ್ರಿಲ್ ಹಾಗೂ ಮೇ ತಿಂಗಳ ಪಡಿತರವನ್ನ ವಿತರಣೆ ಮಾಡಲಾಗ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ. ಏಪ್ರಿಲ್ 10ರ ಒಳಗೆ ರಾಜ್ಯದಲ್ಲಿ ಪಡಿತರ ವಿತರಣೆ ಪೂರ್ಣಗೊಳಿಸುವ ಗುರಿಯಿದೆ ಎಂದಿದ್ದಾರೆ.

ಕಡುಬಡುವರ ಅಂತ್ಯೋದಯ ಕಾರ್ಡ್ ಇದ್ದವರಿಗೆ 2 ತಿಂಗಳಿಗೆ 70 ಕೆಜಿ ಅಕ್ಕಿ ಸಿಗಲಿದೆ. ಬಿಪಿಎಲ್ ದಾರರಿಗೆ 5 ಕೆಜಿ ಅಕ್ಕಿ 2 ಕೆಜಿ ಗೋಧಿ ವಿತರಣೆಯಾಗಲಿದೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲೇ ಇಂದೆ ಪಡಿತರ ವಿತರಣೆ ಶುರುವಾಗಿದೆ. ಗ್ರಾಮೀಣ ಭಾಗದಲ್ಲಿ 2 ದಿನ ಆಗಬಹುದು ಅಂತಾ ಸಚಿವರು ತಿಳಿಸಿದ್ದಾರೆ. ಕರೋನಾದಿಂದಾಗಿ ಪಡಿತರ ಬೆರಳಚ್ಚು ಬೇಕಾಗಿಲ್ಲವೆಂದು ಹೇಳಲಾಗಿದೆ.

ಇನ್ನು ಏಪ್ರಿಲ್ 10ರಿಂದ ಕೇಂದ್ರದ ಪಡಿತರ ಪ್ಯಾಕೇಜ್ ಶುರುವಾಗಲಿದೆ ಎಂದು ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ. ರೇಷನ್ ಪಡೆಯುವ ವೇಳೆ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನ ಮರೆಯಬಾರದು.




Leave a Reply

Your email address will not be published. Required fields are marked *

error: Content is protected !!