‘ಪಡಿತರ ವಿತರಣೆಯಲ್ಲಿ ಹಣ ಪಡೆದರೆ ಕ್ರಮತೆಗೆದುಕೊಳ್ಳಿ’

296

ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ನಮ್ಮವರು ಬಲವಂತವಾಗಿ ಜನ್ರಲ್ಲಿ ಹಣ ಪಡೆದರೆ ಅವ್ರ ವಿರುದ್ದ ಸರ್ಕಾರ ಕಠಿಣ ಕ್ರಮ ಜರುಗಿಸಲಿ ಎಂದು ರಾಜ್ಯ ಪಡಿತರ ಸಂಘದ ರಾಜ್ಯಾಧ್ಯಕ್ಷ ಕೆ.ಕೃಷ್ಣಪ್ಪ ಹೇಳಿದ್ದಾರೆ.

ರಾಜ್ಯದ ಹಲವು ನ್ಯಾಯಬೆಲೆ ಅಂಗಡಿಗಳಲ್ಲಿ ಹಣ ಪಡೆದು ಪಡಿತರ ವಿತರಣೆ ಮಾಡಲಾಗ್ತಿದೆ ಅನ್ನೊ ಆರೋಪ ಕೇಳಿ  ಬಂದಿದೆ. ಈ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಕೃಷ್ಣಪ್ಪ ಮನವಿ ಮಾಡಿದ್ದಾರೆ. ಅಲ್ದೇ, ರಾಜ್ಯ ಸರ್ಕಾರದ ವಿರುದ್ಧ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಲ ನ್ಯಾಯಬೆಲೆ ಅಂಗಡಿಗಳಿಗೆ ಸುಮಾರು 4 ತಿಂಗಳಿಂದ ಕಮಿಷನ್ ನೀಡಿಲ್ಲ ಅಂತ ಕೃಷ್ಣಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯಾಯಬೆಲೆ ಅಂಗಡಿಯವರಿಗೆ ವೈದ್ಯರು, ನರ್ಸ್‌ಗಳಿಗೆ ನೀಡುವಂತೆ 50 ಲಕ್ಷ ವಿಮೆ ನೀಡುವಂತೆ ಮನವಿಮಾಡಿದ್ದು ಪಡಿತರ ಸಾಗಿಸಲು ಹಾಗೂ ವಿತರಣೆ ಮಾಡಲು ಹಮಾಲಿಗಳ ಅಭಾವವಾಗಿದೆ ಎಂದು ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!